ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೂಡ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರದ ಉದ್ದಟತನಕ್ಕೆ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜೀವ ಬಲಿಯಾಗಿವೆ. ಹೀಗಾಗಿ ಸರ್ಕಾರದ ಬಗ್ಗೆ ಜನರಿಗೆ ಕೆಟ್ಟ ಸಂದೇಶ ಹೋಗಿದೆ. ಪೊಲಿಸರನ್ನ ಸಸ್ಪೆಂಡ್ ಮಾಡಲಾಗಿದೆ. ಬಿ. ದಯಾನಂದ್ ಕಮಿಷನರ್ ಇದ್ದಾಗ ಹೊಸ ವರ್ಷಾಚರಣೆ ವೇಳೆ ಅಹಿತಕರ ಘಟನೆ ಆಗಿಲ್ಲ. ಸೆಂಟ್ರಲ್ ಡಿಸಿಪಿ ಯತೀಂದ್ರ ಸಿದ್ದರಾಮಯ್ಯ ಆಪ್ತ. ಹೀಗಾಗಿ ಸಸ್ಪೆಂಡ್ ಅಂತ ನಾಟಕವಾಡ್ತೀವಿ ಅಂತ ಹೇಳಿರುತ್ತಾರೆ. ಆಮೇಲೆ ದೊಡ್ಡ ಹುದ್ದೆ ಕೊಡ್ತೀವಿ ಅಂತ ಹೇಳಿರಬಹುದು ಎಂದು ಆರೋಪಿಸಿದ್ದಾರೆ.
ಬಿಜೆಪಿ ವಿಪಕ್ಷ ನಾಯಕ ಆರ್. ಅಶೋಕ್, ವಿಜಯೇಂದ್ರ ಜೊತೆಗೂಡಿ ಸುದ್ದಿಗೋಷ್ಠಿ ನಡೆಸಿದ ಹೆಚ್ಡಿಕೆ, ವಿಧಾನಸೌಧ ಮುಂಬಾಗ ಹಾಗೂ ಸ್ಟೇಡಿಯಂ ಎರಡೂ ಕಡೆ ಕಾರ್ಯಕ್ರಮಕ್ಕೆ ಮೊದಲೇ ಪ್ಲ್ಯಾನ್ ಆಗಿತ್ತಾ ಅಂತಾ ಪ್ರಶ್ನಿಸಿದ್ದಾರೆ. ಸೆಕ್ಯೂರಿಟಿ ಕಾರಣ ನೀಡಿ ಕಮಿಷನರ್ ಆಗಲ್ಲ ಎನ್ನುತ್ತಾರೆ. ಸ್ಟೇಡಿಯಂನಲ್ಲಿ ಮಾಡಿ ಸಾಕು ಅಂತಾ ಸಲಹೆ ನೀಡುತ್ತಾರೆ.
ಇದೆಲ್ಲವನ್ನೂ ಸಿಎಂ ರಾಜಕೀಯ ಕಾರ್ಯದರ್ಶಿ ಗೊವಿಂದರಾಜು ಸಿಎಂಗೆ ಹೇಳಿದ್ದಾರೆ. ಆಗ ಸಿಎಂ ಕಮಿಷನರ್ಗೆ ನಾನ್ ಹೇಳುತ್ತಿದ್ದೀನಿ ಅಂತಾ ಹೇಳುತ್ತಾರೆ. ಆದರೆ, ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಮಾಡಿಲ್ಲ. ಡ್ರಿಂಕ್ಸ್ ಮಾಡುವವರು ಅರೇಂಜ್ ಮಾಡುವ KSCA ಸ್ಟೇಡಿಯಂಗೆ ನಾನ್ ಹೋಗಬೇಕಾ ಎಂದು ಸಿಎಂ ಪ್ರಶ್ನಿಸಿದ್ದಾರೆ. ಜೊತೆಗೆ ವಿಧಾನಸೌಧದ ಎದುರೇ ಆಗಬೇಕು ಎಂದು ಹಠ ಹಿಡಿದಿದ್ದಾರೆ ಅಂತಾ ಸಿಎಂ ಸಿದ್ದರಾಮಯ್ಯರನ್ನ ತರಾಟೆ ತೆಗೆದುಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಠ ಹಿಡಿದಿದ್ದನ್ನ ತಿಳಿದುಕೊಂಡ ಡಿಸಿಎಂ ಡಿಕೆಶಿ, ಕೋರ್ಟ್ನಿಂದ ನೇರವಾಗಿ HAL ಗೆ ಹೋಗಿದ್ದಾರೆ. ಈ ವೇಳೆ ಅಲ್ಲಿ ಡಿಕೆ ಕೊಹ್ಲಿಗೆ ಕನ್ನಡ ಶಾಲು ಹಾಕಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಅಂತಾ ಶೋ ಅಪ್ ಮಾಡ್ತಾರೆ. ಇವರೇ ಮ್ಯಾಚ್ ಗೆಲ್ಲಿಸಿದ ಥರ ಮುಂದೆ ನಿಂತು ಪೋಸ್ ಕೊಡ್ತಾರೆ ಅಂತಾ ಡಿಸಿಎಂ ಡಿಕೆಶಿ ವಿರುದ್ಧ ಹೆಚ್ಡಿಕೆ ಕಿಡಿಕಾರಿದ್ದಾರೆ.