ಹಾವೇರಿ : ತನ್ನ ನೆಚ್ಚಿನ ಎತ್ತು ಸಾವನ್ನಪ್ಪಿದ್ದಕ್ಕೆ ಶ್ವಾನದ ಮೂಖ ರೋದನೆ ಮನಕಲಕುವ ಘಟನೆಗೆ ಸಾಕ್ಷಿಯಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾವ್ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಈ ಭಾವುಕ ಘಟನೆ ನಡೆದಿದೆ. ಸಿದ್ದಬೀರಪ್ಪ ಗಡ್ಡೆ ಅವರಿಗೆ ಸೇರಿದ ಎತ್ತು ಅನಾರೋಗ್ಯದಿಂದ ಸಾವನ್ನಪ್ಪಿದೆ.
ಎತ್ತು ಸಾವನ್ನಪ್ಪಿದ ಸುದ್ದಿ ತಿಳಿದ ಕ್ಷಣದಿಂದಲೇ ನಾಯಿಯು ಅಂಟಿಕೊಂಡು ಕಣ್ಣೀರಿಡುತ್ತಾ, ಎತ್ತಿನ ಬಳಿಯೇ ಕುಳಿತಿರುವ ದೃಶ್ಯಗಳು ಸ್ಥಳೀಯರನ್ನು ಮನಕಲಕುವಂತೆ ಮಾಡಿವೆ.
ಎತ್ತು ಎಲ್ಲಿಗೆ ಹೋದರೂ ಸದಾ ಅದರ ಜೊತೆಯಲ್ಲೇ ಇರುತ್ತಿದ್ದ ಈ ಶ್ವಾನ, ಹೊಲದಲ್ಲಿ ಉಳುಮೆ ಮಾಡುವ ಸಂದರ್ಭದಲ್ಲೂ ಸಹ ಎತ್ತಿನ ಹಿಂದೆ ಹಿಂದೆ ಹೋಗುತ್ತಿತ್ತು ಎನ್ನಲಾಗಿದೆ.
ಎತ್ತು ಸಾವನ್ನಪ್ಪಿದ ಬಳಿಕ ಅಂತ್ಯಸಂಸ್ಕಾರ ನಡೆಯುವವರೆಗೂ ಶ್ವಾನ ಅಲ್ಲಿಯೇ ಇದ್ದು, ತನ್ನ ನಿಷ್ಠೆ ಮತ್ತು ಸ್ನೇಹವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಗ್ರಾಮದಲ್ಲಿ ಭಾರೀ ಭಾವುಕತೆಯನ್ನು ಮೂಡಿಸಿದೆ.
ಇದನ್ನೂ ಓದಿ : ಸರ್ಕಾರಿ ಬಸ್ಗಳಲ್ಲಿ ಹಾಕಿದ್ದ ಗುಟ್ಕಾ, ಪಾನ್ ಜಾಹೀರಾತು ಕಿತ್ತೆಸೆದ ಯುವಕರು.. ವಿಡಿಯೋ ವೈರಲ್!



















