ಹಾಸನ ನಗರದಲ್ಲಿ ಇತ್ತೀಚೆಗೆ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಬ್ಬಿಣದ ರಾಡ್ನಿಂದ ಮನೆಯ ಹಿಂಬಾಗಿಲ ಬಾಗಿಲು ಮುರಿದು ಖದೀಮರು ಒಳನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾರೆ.
ಆದರೆ, ಮನೆಯಲ್ಲಿದ್ದ ನಾಯಿ ಬೊಗಳಿದ್ದರಿಂದಾಗಿ ಸ್ಥಳದಿಂದ ಚೋರರು ಕಾಲ್ಕಿತ್ತಿದ್ದಾರೆ. ಖದೀಮರನ್ನು ಕಂಡು ನಾಯಿ ಬೊಗಳಿದಾಗ ಕಾರು ಸೆಡ್ ನಲ್ಲಿದ್ದ ಚಾಲಕ ಲೈಟ್ ಆನ್ ಮಾಡಿದ್ದಾನೆ. ಇದನ್ನು ಕಂಡು ಅಲ್ಲಿದ್ದ ಖದೀಮರು ಕಾಲ್ಕಿತ್ತಿದ್ದಾರೆ.
ಮನೆಯಿಂದ ಓಡಿ ಹೋಗುವಾಗ ಗನ್, ಕಬ್ಬಿಣದ ರಾಡ್ ನ್ನು ಬಿಟ್ಟು ಪರಾರಿಯಾಗಿದ್ದಾರೆ. ಹಾಸನ ನಗರದ ಎಸ್ಬಿಎಂ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಜೈಶಂಕರ್ ಎಂಬ ನ್ಯಾಯಾಧೀಶರಿಗೆ ಸೇರಿರುವ ಮನೆಗೆ ನುಗ್ಗಲು ಖದೀಮರು ಯತ್ನಿಸಿದ್ದಾರೆ.
ಜೈ ಶಂಕರ್ ಅವರು ಬೆಂಗಳೂರಿನಲ್ಲಿ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಆ ಮನೆಯಲ್ಲಿ ಭರತ್ ಎಂಬುವವರು ಬಾಡಿಗೆಗೆ ಇದ್ದಾರೆ. ಆದರೆ, ಭರ್ತ ತಮ್ಮ ಸಂಬಂಧಿಕರ ಊರಿಗೆ ವಿಜಯಪುರಕ್ಕೆ ಮದುವೆಗೆ ಹೋಗಿದ್ದನ್ನು ಗಮನಿಸಿದ ಚೋರರು ಒಳನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.