ಉದ್ಯಮಿ ಹಕ್ಕಾಡಿ ಜಗದೀಶ್ ಪೂಜಾರಿ ಮಾಲಿಕತ್ವದಲ್ಲಿ ಅರೆಹೊಳೆಯಲ್ಲಿ ಪ್ರಸಿದ್ಧ ಹಳ್ಳಿ ಮಾರ್ಟ್ ಶಾಖೆ ತೆರೆದುಕೊಂಡಿದೆ. ಬೈಂದೂರು ತಾಲೂಕಿನ ನಾವುಂದ ಗ್ರಾಮ ವ್ಯಾಪ್ತಿಯ (ಅರೆಹೊಳೆ ಬೈಪಾಸ್ ಸಮೀಪದ ಗುಡ್ಡೆ ಚೋದ್ರಿ ಅಂಗಡಿ) ಯಲ್ಲಿ ಹಳ್ಳಿ ಮಾರ್ಟ್ ಹೆಸರಿನ ಸೂಪರ್ ಮಾರ್ಕೆಟ್ ನೂತನವಾಗಿ ನಿನ್ನೆ (ಸೆ.6 ಶುಕ್ರವಾರ) ಚಾಲನೆ ಪಡೆದಿದ್ದು, ಮೀನುಗಾರಿಕಾ ಸಚಿವ ಮಂಕಾಳ ಎಸ್ ವೈದ್ಯ ಉದ್ಘಾಟಿಸಿದರು.
“ಅರೆಹೊಳೆ ಗ್ರಾಮೀಣ ಪ್ರದೇಶ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದು ಬಹಳ ಶ್ಲಾಘನೀಯವಾಗಿದೆ. ಗ್ರಾಮೀಣ ಭಾಗದಲ್ಲಿ ಸೂಪರ್ ಮಾರ್ಕೆಟ್ಟಿನ ಅಗತ್ಯವಿದೆ. ಒಂದೇ ಸೂರಿನಲ್ಲಿ ಇಲ್ಲಿ ಎಲ್ಲವೂ ಲಭ್ಯವಿದ್ದು, ಜನರಿಗೆ ಹೆಚ್ಚಿನ ಅನುಕೂಲವಾಗಿಲಿದೆ. ಹಾಗೆಯೇ ವಿಶೇಷವಾಗಿ ವಸ್ತುಗಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸೌಲಭ್ಯವು ಗ್ರಾಹಕರ ಸಮಯವನ್ನು ಉಳಿಸುತ್ತದೆ. ಗ್ರಾಹಕರಿಗೆ ಇಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳು ಸಿಗಲಿವೆ. ಈ ಸೂಪರ್ ಮಾರ್ಕೇಟ್ ಅಭಿವೃದ್ಧಿ ಹೊಂದಲಿ” ಎಂದು ಸಚಿವರು ಶುಭಾಹಾರೈಸಿದರು.

ಇನ್ನು ಸೂಪರ್ ಮಾರ್ಕೇಟ್ ಮುಖ್ಯಸ್ಥ ಹಕ್ಕಾಡಿ ಜಗದೀಶ್ ಪೂಜಾರಿ ಅವರು ಮಾತನಾಡಿ “ಹಳ್ಳಿಯಲ್ಲಿ ಸೂಪರ್ ಮಾರ್ಕೆಟ್ ತೆರೆಯುವುದರಿಂದ ಹಳ್ಳಿಯ ಜನರಿಗೆ ತುಂಬಾ ಪ್ರಯೋಜನವಾಗಲಿದೆ. ₹699 ಕ್ಕೂ ಹೆಚ್ಚಿನ ಖರೀದಿ ಮಾಡಿದಲ್ಲಿ ಗ್ರಾಹಕರಿಗೆ ಉಚಿತ ಉಡುಗೊರೆ ಗೆಲ್ಲುವ ಅವಕಾಶವಿದೆ. ನಮ್ಮ ಹಳ್ಳಿ ಮಾರ್ಟನಲ್ಲಿ ಶೇಖಡಾ 99% ಕ್ಕೂ ಹೆಚ್ಚು ಉತ್ಪನ್ನಗಳು ಕಡಿತದ ಬೆಲೆಗಳಲ್ಲಿ ಲಭ್ಯವಿದೆ.
5000+ ಹೆಚ್ಚು ಉತ್ಪನ್ನಗಳಲ್ಲಿ ನಂಬಲಾರದ ಕಡಿತ ಬೆಲೆಗಳಲ್ಲಿ ಆಯ್ಕೆ ₹1000 ಕ್ಕೂ ಹೆಚ್ಚಿನ ಖರೀದಿ ಮಾಡಿದರೆ 1 ಕಿಮೀ ಒಳಗೆ ಉಚಿತ ಹೋಮ್ ಡೆಲಿವರಿ ವ್ಯವಸ್ಥೆ ಸಿಗಲಿದೆ ಎಂದು ಮಾಹಿತಿ ಹಂಚಿಕೊಂಡರು.

ಈ ಸಂದರ್ಭದಲ್ಲಿ ಮರವಂತೆ -ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಅಧ್ಯಕ್ಷ ಎಸ್ ರಾಜು ಪೂಜಾರಿ,
ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ, ಬೈಂದೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಕಂಬದಕೋಣೆ ರೈತ ಸೇವಾ ಸಹಕಾರಿ ಸಂಘ ಲಿ. ಉಪ್ಪುಂದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಹಾಗೂ ಹಳ್ಳಿ ಮಾರ್ಟ್ ಮಾಲೀಕ ಜಗದೀಶ್ ಪೂಜಾರಿಯವರ ಕುಟುಂಬಸ್ಥರು, ಸ್ನೇಹಿತರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದು, ಏಳಿಗಾಗಿ ಶುಭ ಹಾರೈಸಿದರು.