ಬೆಂಗಳೂರು: ಜಿಬಿಎ ಮುಖ್ಯ ಅಯುಕ್ತರ ಅದೇಶದ ಮೇಲೆ ಇಂದಿನಿಂದ ರಾಜಧಾನಿಯಲ್ಲಿ ಗುಂಡಿ ಮುಚ್ಚುವ ಕಾರ್ಯ ಶುರುವಾಗಿದ್ದು, ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಯ ರಸ್ತೆಗಳ ಗುಂಡಿಗಳಿಗೆ ಮುಕ್ತಿ ಸಿಗಲಿದೆ.
ನಗರದಲ್ಲಿ ಇದುವರೆಗೆ 5 ಸಾವಿರ ಗುಂಡಿಗಳು ಇವೆ, ಪ್ರತಿ ನಗರ ಪಾಲಿಕೆಯ ಆಯುಕ್ತರ ನೇತೃತ್ವದಲ್ಲಿ ಗುಂಡಿ ಮುಚ್ಚಲು ಕೆಲಸ ನಡೆಯುತಿದ್ದು, ಮೂರು ದಿನಗಳಲ್ಲಿ ನಗರದ ಅರ್ಧದಷ್ಟು ಗುಂಡಿಗಳಿಗೆ ಮುಕ್ತಿ ಸಿಗಲಿದೆ ಎನ್ನಲಾಗುತ್ತಿದೆ.
ಇತ್ತ ಮಹಾದೇವಪುರ, ಸರ್ಜಪುರ, ಬೆಳ್ಳಂದೂರು ರಸ್ತೆಗಳಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಅ ಪ್ರದೇಶಗಳಲ್ಲಿ ಸದ್ಯ ತಾತ್ಕಾಲಿಕವಾಗಿ ಗುಂಡಿ ಮುಚ್ಚಲಾಗುತ್ತೆ. ಮೆಟ್ರೋ ಕಾಮಗಾರಿ ಮುಗಿದ ಮೇಲೆ ವೈಟ್ ಟ್ಯಾಪಿಂಗ್ ಮಾಡಲಾಗುತ್ತದೆ. ಅಲ್ಲಿಯವರೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಆಯುಕ್ತರು ಮಾನವಿ ಮಾಡಿದ್ದಾರೆ.
ಇನ್ನು, ನಗರದ ಪ್ರತಿ ರಸ್ತೆಗಳಿಗೆ ಸ್ಥಳೀಯ ಇಂಜಿನಿಯರ್ ಬೇಟಿ ನೀಡಿ ರಸ್ತೆ ಪರಿಶೀಲನೆ ಮಾಡಬೇಕು. ಪರಿಶೀಲನೆ ನಡೆಸಿದ ರಸ್ತೆಗಳಲ್ಲಿ ಗುಂಡಿ ಕಂಡು ಬಂದರೆ 24 ಗಂಟೆಯಲ್ಲಿ ಗುಂಡಿ ಮುಚ್ಚಿ. ಬಳಿಕ ಅಯುಕ್ತರ ವಾಟ್ಸ್ ಆಪ್ ಗೆ ಹಾಗೂ ಸಮಾಜಿಕ ಜಾಲತಾಣದಲ್ಲಿ ಪೋಟೋ ಅಪ್ ಲೋಡ ಮಾಡಬೇಕು. ಒಂದು ವೇಳೆ ಗುಂಡಿ ಮುಚ್ಚಿಲ್ಲ ಎಂದರೆ ಆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಜಿಬಿಎ ಮುಖ್ಯ ಅಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.



















