ಕೊಡಗು: ಗ್ರಾಪಂ ಸಿಬ್ಬಂದಿಗಳು ಸಾರ್ವಜನಿಕರ ಎದುರೇ ಬಡಿದಾಡಿಕೊಂಡಿರುವ ಘಟನೆ ಜಿಲ್ಲೆಯ ಸಿದ್ದಪುರದಲ್ಲಿ ನಡೆದಿದೆ.
ಹಣಕಾಸಿನ ಖಡತ ವಿಲೆವಾರಿ ವಿಚಾರದಲ್ಲಿ ವಾಟರ್ ಮ್ಯಾನ್ ಸುಬ್ರಮಣಿ ಮತ್ತು ಅಕೌಂಟೆಂಟ್ ಸುಬ್ರಮಣ್ಯ ಗಲಾಟೆ ಮಾಡಿಕೊಂಡಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಗಲಾಟೆಯ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಇದಕ್ಕೆ ಸಾರ್ವನಿಜನಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.