ಬೀದರ್: ಸರ್ಕಾರಿ ಜಾಗದಲ್ಲಿದ್ದ ಮರಗಳನ್ನು ಅಕ್ರಮವಾಗಿ ಕಡಿದ ಆರೋಪದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯನ ವಿರುದ್ಧ FIR ದಾಖಲಾಗಿದೆ.
ಹುಲಸೂರು ತಾಲೂಕಿನ ಸೋಲದಾಬಕಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿತೇಶ್ ವೆಂಕಟರಾವ್ ಬಿರಾದಾರ ಎಂಬುವವರ ವಿರುದ್ಧ FIR ದಾಖಲಾಗಿದೆ. 13 ಟಿಂಬರ್ ಮರಗಳನ್ನು ಅಕ್ರಮವಾಗಿ ಕಡಿದ ಆರೋಪದ ಹಿನ್ನೆಲೆಯಲ್ಲಿ ಎಫ್ ಐಆರ್ ದಾಖಲಾಗಿದೆ.
109 ಸಣ್ಣ ಗಿಡಗಳನ್ನು ಹಾಳು ಮಾಡಿದ್ದಾರೆ ಎನ್ನಲಾಗಿದೆ. ಜಮೀನು ಪಕ್ಕದ ನಾಲಾಕ್ಕೆ ಹೊಂದಿಕೊಂಡಿದ್ದ ಮರಗಳನ್ನು ಅಕ್ರಮವಾಗಿ ಕಡಿದ್ದಾರೆ ಎನ್ನಲಾಗಿದೆ. ಸುಮಾರು ಎರಡು ಟನ್ನಷ್ಟು ಟಿಂಬರ್ ಹಾಳು ಮಾಡಿರುವ ಆರೋಪ ಕೇಳಿ ಬಂದಿದೆ. KFR 1969ರಡಿ ಹುಲಸೂರು ಪ್ರಾದೇಶಿಕ ವಲಯದಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.