ಕೋಲಾರ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೋವಿಂದಗೌಡ ಗೆದ್ದ ಹಿನ್ನೆಲೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣ ದೊಡ್ಡ ಹೈಡ್ರಾಮಾ ಸೃಷ್ಟಿಸಿರುವ ಘಟನೆ ನಡೆದಿದೆ.

ಮತ ಎಣಿಕಾ ಕೇಂದ್ರದ ಎದುರು ರಮೇಶ್ ಕುಮಾರ್ ಬೆಂಬಲಿಗರ ಹೈಡ್ರಾಮ ಸೃಷ್ಠಿಸಿದ್ದಾರೆ. ಗೋವಿಂದಗೌಡ ವಿರುದ್ದ ಮತ ಎಣಿಕಾ ಕೇಂದ್ರದ ಎದುರು ಪ್ರತಿಭಟನೆ ನಡೆಸಿ ಘೋಷಣೆ ಕೂಗಿದ್ದಾರೆ. ನಂತರ ಬ್ಯಾರಿಕೇಡ್ ಹತ್ತಿ ನುಗ್ಗಲು ಯತ್ನಿಸಿದ್ದಾರೆ.
ಈ ವೇಳೆ ಕೆಲವರ ಮೇಲೆ ಪೊಲೀಸರು ಲಾಠೀ ಬೀಸಿ ಗುಂಪನ್ನು ಚದುರಿಸಿದ್ದಾರೆ. ಒಂದು ಕಡೆ ರಮೇಶ್ ಕುಮಾರ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರೆ ಮತ್ತೊಂದು ಕಡೆ, ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಗೋವಿಂದಗೌಡ ಹೊರಕ್ಕೆ ತೆರಳಿದರು. ಮತ ಎಣಿಕಾ ಕೇಂದ್ರದ ಎದುರು ಗೋವಿಂದಗೌಡ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದರು.