ಬೆಂಗಳೂರು: ಕಾಲ್ತುಳಿತ ದುರಂತಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಆರೋಪಿಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೋಡಿಹಳ್ಳಿ ಚಂದ್ರುಶೇಖರ್ ಹಾಗೂ ಸಿಎಂ ಇಬ್ರಾಹಿಂ ಜಂಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ರಾಜ್ಯ ಸರ್ಕಾರದಿಂದ ಈ ಘಟನೆ ಆಗಿದೆ. 11 ಜನರ ಸಾವಿಗೆ ರಾಜ್ಯ ಸರ್ಕಾರವೇ ನೇರ ಕಾರಣ. ಕ್ರಿಕೆಟ್ ಅನ್ನೋದು ಕ್ರೀಡೆ ನಾ? ಅಥವಾ ಜೂಜಾಟವಾ? ಎಂಬುವುದನ್ನು ಮೊದಲು ಕೇಂದ್ರ ಕ್ರೀಡಾ ಇಲಾಖೆ ಹೇಳಬೇಕು. ಈ ಪ್ರಕರಣವನ್ನು ಹೈಕೋರ್ಟ್ ನ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು. ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ಮ್ಯಾಚ್ ನಡೆಸಿದರೆ ಸಾವಿರಾರು ಕೋಟಿ ರೂ. ದಂಧೆ ಆಗಿರುತ್ತದೆ. ಜನರ ಹಣ ಲೂಟಿ ಮಾಡಿ ಐಪಿಎಲ್ ಪಂದ್ಯ ನಡೆಸಲಾಗಿರುತ್ತದೆ. ಆದರೆ, ಒಂದು ಬಾರಿಯೂ ಅರ್ ಸಿಬಿ ತಂಡದವರು ಸತ್ತವರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಲಿಲ್ಲ. ಈ ಪ್ಲೇಯರ್ ಗಳು ಒಂದು ಕೋಟಿ..ಎರಡು ಕೋಟೆ.. ಹತ್ತು ಕೋಟಿಗೆ ಅಂತ ಬಿಕರಿ ಅದವರು. ಇವರಿಗೆ ವಿಧಾನ ಸೌಧದ ಮುಂದೆ ಸನ್ಮಾನ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.