ಬೆಂಗಳೂರು: ಸರ್ಕಾರಿ ನೌಕರರು ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಲೋಕಾಯಕ್ತ ಅಧಿಕಾರಿಗಳು ಯಾವ ಅಧಿಕಾರಿಗಳ ಆಸ್ತಿಯ ಕುರಿತು ವಿವರ ಕೇಳುತ್ತದೆಯೋ? ಆ ಅಧಿಕಾರಿಗಳು ವಿಳಂಬ ಮಾಡದೆ ಲೋಕಾಯುಕ್ತಕ್ಕೆ ಆಸ್ತಿಯ ವಿವರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಒಂದು ವೇಳೆ ಸರ್ಕಾರದ ಸೂಚನೆ ಪಾಲಿಸದಿದ್ದರೆ, ಇಲಾಖಾ ಮುಖ್ಯಸ್ಥರು ಹಾಗೂ ಪ್ರಾಧಿಕಾರದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನು ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಇತ್ತೀಚೆಗಷ್ಟೇ ಲೋಕಾಯುಕ್ತ, ಸರ್ಕಾರಿ ಅಧಿಕಾರಿಗಳು ಚರಾಸ್ತಿ, ಸ್ಥಿರಾಸ್ತಿಗಳನ್ನು ವೆಬ್ ಸೈಟ್ ನಲ್ಲಿ ಘೋಷಣೆ ಮಾಡಬೇಕೆಂದು ಹೇಳಿತ್ತು. ಇದಕ್ಕೆ ನೌಕರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಈಗ ಸರ್ಕಾರ ಜಾಣ ನಡೆಯ ಆದೇಶ ಹೊರಡಿಸಿದೆ.