ಕೋಟೆನಾಡು ಚಿತ್ರದುರ್ಗದಲ್ಲಿ ಯುವಕರ ತಂಡವೊಂದು ಚಿನ್ನದ ಐಪಿಎಲ್ ಕಪ್ ತಯಾರಿಸಿ ಅಚ್ಚರಿ ಮೂಡಿಸಿದ್ದಾರೆ. ಹೊಸದುರ್ಗ ಪಟ್ಟಣದ ವಿಜ್ಞೇಶ್ವರ ಜ್ಯುವೆಲರಿ ಶಾಪ್ನ ಯುವಕರು ಚಿನ್ನದ ಕಪ್ ತಯಾರಿಸಿದ್ದು, ಆರ್ಸಿಬಿ ಅಭಿಮಾನಿಗಳನ್ನ ಅಟ್ರಾಕ್ಟ್ ಮಾಡಿದ್ದಾರೆ.
ಅದ್ರಲ್ಲೂ ಅರ್ಧ ಗ್ರಾಂನಲ್ಲಿ ಗೋಲ್ಡ್ ಕಪ್ ನಿರ್ಮಿಸಿ ಫ್ಯಾನ್ಸ್ ಹುಬ್ಬೇರುವಂತೆ ಮಾಡಿದ್ದಾರೆ. ಫೈನಲ್ ತಲುಪಿರೋ ಆರ್ಸಿಬಿ ಐಪಿಲ್ ಕಪ್ ಗೆದ್ದರೆ ಚಿನ್ನದಿಂದ ತಯಾರು ಮಾಡಿರೋ ಕಪ್ನ್ನ ವಿರಾಟ್ ಕೊಹ್ಲಿಗೆ ತಲುಪಿಸುವ ಗುರಿ ಹೊಂದಿದ್ದಾರೆ. ಜ್ಯುವೆಲರಿ ಶಾಪ್ನ ಸುನೀಲ್, ಮಾರುತಿ ಸೂಕ್ಷ್ಮ ಕುಸುರಿ ಕೆಲಸ ಮಾಡಿ ಅತೀ ಕಡಿಮೆ ಬಂಗಾರದಲ್ಲಿ ಕಪ್ ರೆಡಿ ಮಾಡಿ ಸೈ ಎನಿಸಿಕೊಂಡಿದ್ದು, ಆರ್ಸಿಬಿ ಫ್ಯಾನ್ಸ್ ಪ್ರೀತಿಗೆ ಪಾತ್ರರಾಗಿದ್ದಾರೆ. ಈ ಹಿಂದೆ ಬಂಗಾರದ wold cup ತಯಾರಿಸಿ ಯೂತ್ಸ್ ಹೆಸರು ಮಾಡಿದ್ರು.