ವಿಜಯಪುರ: ಜಿಲ್ಲೆಯಲ್ಲಿ ಇಂದು ಬಿಜೆಪಿ ಜನಾಕ್ರೋಶ ಯಾತ್ರೆ ಇರುವ ಹಿನ್ನೆಲೆಯಲ್ಲಿ ಯತ್ನಾಳ್ ಬೆಂಬಲಿಗರು ಗೋ ಬ್ಯಾಕ್ ಪೋಸ್ಟರ್ಸ್ ಅಭಿಯಾನ ನಡೆಸುತ್ತಿದ್ದಾರೆ.
ಯತ್ನಾಳ್ ಉಚ್ಚಾಟನೆಯಾದ ಬಳಿಕ ವಿಜಯಪುರದಲ್ಲಿ ಇಂದು ಜನಾಕ್ರೋಶ ಯಾತ್ರೆ ನಡೆಯುತ್ತಿದೆ. ಆದರೆ, ಯತ್ನಾಳ್ ಬೆಂಬಲಿಗರು ಗೋ ಬ್ಯಾಕ್ ಪೋಸ್ಟರ್ಸ್ ನಿಂದ ವಿರೋಧಿಸುತ್ತಿದ್ದಾರೆ. ಆದರೆ, ಮತ್ತಷ್ಟು ಯತ್ನಾಳ್ ಬೆಂಬಲಿಗರು ಸ್ವಾಗತ ಎಂದು ಪೋಸ್ಟರ್ ನಿಂದ ಸ್ವಾಗತಿಸುತ್ತಿದ್ದಾರೆ.
ಸ್ವಾಗತಿಸುತ್ತಿರುವ ಬೆಂಬಲಿಗರು, ಯತ್ನಾಳ್ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಿಜೆಪಿ ಶಾಸಕರು ಬಂದು ನೋಡಿ ಎಂದು ಪೋಸ್ಟರ್ ಮೂಲಕ ಗಮನ ಸೆಳೆಯುತ್ತಿದ್ದಾರೆ.