ಚಿತ್ರದುರ್ಗ: ಗೆಳತಿ ಸೈಕಲ್ ಕೊಡದಿದ್ದಕ್ಕೆ 11 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಸ್ಪಂದನ(11) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕಿ ಎನ್ನಲಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಹರಿಶ್ಚಂದ್ರ ಘಾಟ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ರುದ್ರಮ್ಮ ಶ್ರೀನಿವಾಸ್ ಎಂಬ ದಂಪತಿಯ ಪುತ್ರಿ ಸ್ಪಂದನ ಆತ್ಮಹತ್ಯೆಗೆ ಶರಣಾಗಿರುವ ಬಾಲಕಿ ಎನ್ನಲಾಗಿದೆ.
ಸ್ಪಂದನ ಮಧ್ಯಾಹ್ನ ಗೆಳತಿಯೊಂದಿಗೆ ಸೈಕಲ್ ಆಟವಾಡಿದ್ದಾಳೆ. ಆಗ ಗೆಳತಿ ಬಳಿ ಸೈಕಲ್ ಕೇಳಿದ್ದಾಳೆ. ಆಗ ಗೆಳತಿ ನಿರಾಕರಿಸಿದ್ದಾರೆ. ಸೈಕಲ್ ಕೊಡದಿದ್ದಕ್ಕೆ ನೇಣು ಹಾಕಿಕೊಳ್ಳುವೆ ಎಂದು ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಮನೆಯಲ್ಲಿ ಯಾರು ಇಲ್ಲದಾಗ ಬಾಗಿಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ DYSP ಶಿವಕುಮಾರ್, CPI ರಾಘವೇಂದ್ರ ಕಾಂಡಿಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.