ಯಾದಗಿರಿ: ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆದಿರುವ ಘಟನೆಗೆ ಮಾಜಿ ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ.
ಕಾಶ್ಮೀರದಲ್ಲಿ ನಡೆದ ದಾಳಿಯಲ್ಲಿ ಕನ್ನಡಿಗರೂ ಬಲಿಯಾಗಿದ್ದಾರೆ. ಶಿವಮೊಗ್ಗದ ಮಂಜುನಾಥ ಹಾಗೂ ಬೆಂಗಳೂರಿನ ಭೂಷಣ್ ಮೇಲೆ ಉಗ್ರರಿಂದ ದಾಳಿ ನಡೆದಿದೆ. ಕುಟುಂಬ ಸಮೇತ ಟೂರಿಸ್ಟ್ ಆಗಿ ಹೋಗಿದ್ದವರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಶಿವಮೊಗ್ಗದ ಮಜುನಾಥ್ ಕೊಲೆಯಾಗುತ್ತಾರೆ. ಭರತ್ ಭೂಷಣ್ ಗಾಯಾಳುವಾಗಿ ಸಾವನ್ನಪ್ಪುತ್ತಾರೆ. ಭರತ್ ಭೂಷಣ್ ಪತ್ನಿ ನಮನ್ನು ಕೊಲ್ಲು ಅಂತ ಅಂಗಲಾಚುತ್ತಾಳೆ. ನಿನ್ನನ್ನ ಕೊಲುವುದಿಲ್ಲ ನೀನು ಮೋದಿಗೆ ಹೋಗಿ ಹೇಳು, ಭಾರತೀಯ ಹಿಂದೂಗಳನ್ನು ಯಾರನ್ನೂ ಬಿಡುವಂಗಿಲ್ಲ. ನಿಮ್ಮ ಪ್ರಧಾನಿ ಮೋದಿ ಅವರನ್ನ ಕೊಲ್ತೀವಿ ಅಂತ ಹೇಳು ಅಂತಾರೆ. ಅವರಿಗೆ ನಾಲಯಾಕ್ ಅಂತಿರೋ? ಹೋರಾಟಗಾರ ಅಂತಿರೋ? ಎಂದು ಕಿಡಿಕಾರಿದ್ದಾರೆ.
ಉಗ್ರರು ಸೈಕೋಗಳ ರೀತಿ ವರ್ತಿಸಿದ್ದಾರೆ. ಯಾರೂ ಹಿಂದೂಗಳು, ಮುಸ್ಲಿಂ ಎಂದು ಬಟ್ಟೆ ಬಿಚ್ಚಿ ಹೊಡೆದಿದ್ದಾರೆ. ಹಿಂಗೆ ಹೇಳಿ ಹೇಳಿ 28 ಮಂದಿಯನ್ನ ಕೊಂದಿದ್ದಾರೆ. ಭಾರತದ ಮೇಲೆ ದಾಳಿ ಮಾಡಲು ಸಂಚು ರೂಪಾಸಿದ್ದಾರೆ. ಪಾಕಿಸ್ತಾನದವರಿಗೆ ಗೊತ್ತಿರಲಿ. ನಮ್ಮ ದೇಶದ ಸೈನಿಕರೊಂದಿಗೆ ಮೂರ್ನಾಲ್ಕು ಬಾರಿ ಸೋತಿದ್ದಾರೆ. ಹೀನಾಯವಾಗಿ ಸೋತಿದ್ದರೂ ಮತ್ತೆ ಮತ್ತೆ ತಮ್ಮ ಉದ್ಧಟತನ ಪ್ರದರ್ಶಿಸುತ್ತಿದ್ದಾರೆ.
ಸೇನಾ ಮುಖ್ಯಸ್ಥ ಜಮ್ಮು ಕಾಶ್ಮೀರದ ಹಿಂದೂಗಳ ಬಗ್ಗೆ ಪಂಡಿತರ ಬಗ್ಗೆ ಹೊಂದಾಣಿಕೆ ಇಲ್ಲ ಅಂತ ಹೇಳಿದ್ದಾರೆ. ಬಹಳಷ್ಟು ವಿಕೃತವಾಗಿ ಮಾತನಾಡುವ ಕೆಲಸ ಮಾಡಿದ್ದಾರೆ. ಆರ್ಥಿಕವಾಗಿ ದಿವಾಳಿ ಎದ್ದಿದ್ದೀರಿ. ನೀಮ್ಮನ್ನ ಯಾರೂ ಮೂಸಿ ನೋಡಲಾಗದ ಸ್ಥಿತಿಗೆ ಬಂದಿದ್ದೀರಿ. ವಿಶ್ವ ನಿಮಗೆ ಟೆರರಿಸ್ಟ್ ದೇಶ ಅಂತ ಘೋಷಣೆ ಮಾಡಿದೆ. ರಾಜಕಾರಣಿಗಳ ಸ್ವಾರ್ಥದಿಂದ ಆವತು ವಿಭಜನೆ ಆಗಿದ್ದರೆ ಒಳ್ಳೆಯದಾಗಿತ್ತು. 1947 ಕ್ಕಿಂತ ಮುಂಚೆ ರಾಜಕಾರಣಿಗಳು ಗಟ್ಟಿಯಾದ ನಿಲುವು ಹೊಂದಿದ್ದರಿಂದ ಇವತ್ತು ಜಮ್ಮು ಕಾಶ್ಮೀರ ನಮ್ಮ ಕೈಯಲ್ಲಿದೆ.
ವಿಭಜನೆ ಸಂದರ್ಭದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡಿಲ್ಲ. ಅದಕ್ಕೆ ಇಂತಹ ಘಟನೆಗಳು ನಡೆಯುತ್ತಿವೆ. 1948 ರಲ್ಲಿ ಆವತು ನಾವು ಮನಸು ಮಾಡಿದರೆ ಪಾಕಿಸ್ತಾನ ಉಳಿತಾ ಇರಲಿಲ್ಲ. ರಾಜಕಾರಣಿಗಳ ಸ್ವಾರ್ಥದಿಂದ ಸೈನಿಕರನ್ನು ವಾಪಸ್ಸು ಕರೆಯಿಸಿಕೊಳ್ಳಲಾಯಿತು. 30 ಟೂರಿಸ್ಟ್ ಕೊಲ್ಲುವಾಗ ಬಟ್ಟೆ ಬಿಚ್ಚಿ ಕೊಂದಿದ್ದಾರೆ. ಬಾಂಗ್ಲಾದೇಶ ಯುದ್ದ ನಡೆಯುವಾಗ 80 ಸಾವಿರ ಸೈನಿಕರು ನಮ್ಮ ಜೊತೆಗೆ ಇದ್ದರು. ಆದರೆ ಯಾಕೆ ಹೀಗೆ ಮಾಡಿದ್ರೂ ಗೊತ್ತಿಲ್ಲ. ಜಮ್ಮು ಕಾಶ್ಮೀರ ನಮ್ಮ ದೇಶದ ಕಿರಿಟ್ ಇದ್ದಂತೆ. 371 ಆರ್ಟಿಕಲ್ ತೆಗೆಯುವ ಕೆಲಸವನ್ನು ಪ್ರಧಾನಿ ಮಾಡಿದ್ದಾರೆ. 371 ಆರ್ಟಿಕಲ್ ತೆಗೆದರೂ ಸಹ ಟೆರರಿಸಂ ಮೆರೆದಿದ್ದಾರೆ. ನಮ್ಮ ಪ್ರಧಾನಿಗಳು ಈಗಾಗಲೇ ಶಪಥ ಮಾಡಿದ್ದಾರೆ.
ಈ ಕೃತ್ಯದಲ್ಲಿ ಭಾಗಿಯಾದವರ ಅಂತ್ಯ ಆಗುವವರೆಗೂ ನಿದ್ದೆ ಮಾಡಲ್ಲ ಎಂದಿದ್ದಾರೆ. ಕುಟುಂಬದಲ್ಲಿ ಒಬ್ಬ ಸೈನಿಕ ಆಗಬೇಕು ಎಂಬ ಕಾನೂನು ತರಬೇಕು. ಇಸ್ರೇಲ್ ನಂತ ಸಣ್ಣ ದೇಶಕ್ಕೆ ದೊಡ್ಡ ದೇಶಗಳು ಹೆದರುತ್ತಿರುವುದೇ ಇದಕ್ಕೆ. ಅದು ನಮ್ಮ ದೇಶದಲ್ಲಿಯೂ ಮುಂದುವರೆಯಬೇಕು ಎಂದಿದ್ದಾರೆ.