ಸ್ವಾಧೀನವಾಗುವ ಅರಣ್ಯಕ್ಕೆ ಬದಲಿ ಭೂಮಿ ಒದಗಿಸುವಂತೆ ಕರ್ನಾಟ೨ಕ ವಿದ್ಯುತ್ ನಿಗಮಕ್ಕೆ ಷರತ್ತು ವಿಧಿಸಿ 6,644 ಕೋಟಿ ರೂ. ವೆಚ್ಚದಲ್ಲಿ ಶರಾವತಿ ಪಂಪ್ಟ್ ಸ್ಟೋರೇಜ್ ನಿರ್ಮಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಪ್ಡ್ ಸ್ಟೋರೇಝ್ ಯೋಜನೆಗೆ 7 ಕಿ. ಮೀ ಅಂತರದ 10 ಮೀಟರ್ ವ್ಯಾಸದ ಕಾಂಕ್ರೀಟ್ ಸುರಂಗ ಮಾರ್ಗ ನಿರ್ಮಾಣವಾಗಲಿದ್ದು, ಶೀಘ್ರ ಕಾಮಗಾರಿ ಆರಂಬ ಆಗಲಿದೆ. ೩೪ ಹೆಕ್ಟರ್ ಅರಣ್ಯ ಭೂಮಿ 140 ಎಕರೆ ಕಂದಾಯ ಭೂಮಿ ಬಳಕೆಯಾಗುತ್ತಿದೆ ಎಂದು ಹೇಳಿದ್ದಾರೆ.
ಸಾಗರ ತಾಲೂಕಿನ ಹೆನ್ನೆ ಭಾಗದಲ್ಲಿ ರೈತರ 8.32 ಎಕರೆ ಮಾತ್ರ ಸ್ವಾಧೀನ ಆಗಲಿದೆ. ಈಗಾಗಲೇ ಅವರೊಂದಿಗೆ ಮಾತುಕತೆ ನಡೆಸಿ ಪರಿಹಾರ ಪಡೆಯಲು ಒಪ್ಪಿದ್ದೇವೆ. ಸಂತ್ರಸ್ತರ ಕುಟುಂಬದವರಿಗೆ ಕೆಪಿಸಿಯಲ್ಲಿ ಉದ್ಯೋಗ ನೀಡಲಾಗುತ್ತದೆ. ಈ ಯೋಜನೆಯಿಂದ ಪರಿಸರ ನಾಶವಾಗಲಿದೆ ಎನ್ನುವ ಆರೋಪ ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದೂ ಕೂಡ ಅವರು ಹೇಳಿದ್ದಾರೆ.