ಬೆಂಗಳೂರು: ನಾಯಿಗೆ ಕಲ್ಲು ಹೊಡಿದಕ್ಕೆ ಕಿರಿಕ್ ಉಂಟಾಗಿ.ಕೈ-ಕೈ ಮಿಲಾಯಿಸಿಕೊಂಡು ಹೊಡೆದಾಟ ನಡೆಸಿರುವ ಘಟನೆಯೊಂದು ನಡೆದಿದೆ.
ನಿನ್ನೆ ಸಂಜೆ ನಾಗರಭಾವಿಯಲ್ಲಿ ಈ ಘಟನೆ ನಡೆದಿದೆ. ಹೊಡೆದಾಟದ ದೃಶ್ಯ ಸಿಸಿಟಿವಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮನೆ ಮುಂದೆ ಇದ್ದ ನಾಲ್ಕೈದು ಬೀದಿ ನಾಯಿಗೆ ಕಲ್ಲು ಹೊಡಿದು ಯುವಕ ಓಡಿಸಿದ್ದಾನೆ. ಎದುರು ಮನೆಯ ವ್ಯಕ್ತಿ ಬಂದು ಪ್ರಶ್ನಿಸಿದ್ದಾರೆ. ಆಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಕೈ ಕೈ ಮಿಲಾಯಿಸಿದ್ದಾರೆ.
ಆನಂತರ ಯುವಕನ ಕಡೆಯವರು ಹಾಗೂ ಆ ವ್ಯಕ್ತಿ ಕಡೆಯವರು ಗಲಾಟೆ ಮಾಡಿಕೊಂಡಿದ್ದಾರೆ.