ಗೌರಿಬಿದನೂರಿನಲ್ಲಿ ಸಿಎಂ ಸಿದ್ದರಾಮಯ್ಯ ನಿನ್ನೆಯಷ್ಟೇ ಉದ್ಘಾಟನೆ ನಡೆಸಿದ್ದ ಸೋಲಾರ್ ಪ್ಲಾಂಟ್ ಸ್ಥಾಪನೆ ವಿಚಾರವಾಗಿ ಮಾಜಿ ಸಚಿವ ಎನ್ ಎಚ್ ಶಿವಶಂಕರರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಜಮೀನು ಬಾಡಿಗೆ ಪಡೆದಿರುವ ಬಗ್ಗೆ ಎನ್.ಎಚ್. ಶಿವಶಂಕರರೆಡ್ಡಿ ವಿರೋಧ ವ್ಯಕ್ತಪಡಿಸಿದ್ದಾರೆ. ರೈತರ ಜಮೀನನ್ನು ಇಪ್ಪತೈದು ಸಾವಿರ ರೂ.ಗೆ ಬಾಡಿಗೆ ಪಡೆದಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕುಸುಮ್ ಸಿ ಯೋಜನೆಯ ಹಿನ್ನೆಲೆಯಲ್ಲಿ ಭೂಮಿ ಬಾಡಿಗೆ ಕೊಟ್ಟಿರುವ ರೈತರಿಗೆ ನಷ್ಟವಾಗಿದೆ. ಹೀಗಾಗಿ ರೈತರನ್ನು ಪಾಲುದಾರರಾಗಿ ಮಾಡಿಕೊಳ್ಳುವಂತೆ ಮಾಜಿ ಸಚಿವ ಶಿವಶಂಕರರೆಡ್ಡಿ ಆಗ್ರಹಿಸಿದ್ದಾರೆ. ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಮೂರೂವರೆ ಕೋಟಿ ಬಂಡವಾಳ ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಒಂದು ಕೋಟಿ ಸಬ್ಸಿಡಿ ಕೊಡುತ್ತಿದೆ. ಹೀಗಾಗಿ ರೈತರನ್ನು 50 ಪರ್ಸೆಂಟ್ ಪಾರ್ಟ್ನರ್ ಶಿಪ್ ಮಾಡಿಕೊಳ್ಳಿ. ಆ ಪ್ರದೇಶದ ಭೂಮಿಯಲ್ಲಿ ತಿಂಗಳಿಗೆ ನಾಲ್ವತ್ತು ಸಾವಿರ ಸಾವಿರ ರೂಪಾಯಿವರೆಗೆ ಬೆಳೆಯುವ ರೈತರಿದ್ದಾರೆ. ಆದರೆ, ರಾಜ್ಯ ಸರ್ಕಾರ 25 ಸಾವಿರ ರೂ. ಬಾಡಿಗೆ ಕೊಟ್ಟು ಲಾಕ್ ಮಾಡಿದೆ. ಬಂಡವಾಳ ಶಾಹಿಗಳ ಕೈಯಲ್ಲಿ ರೈತರನ್ನು ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.