ನಟ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅನಾರೋಗ್ಯ ಸಮಸ್ಯೆಯಿಂದಾಗಿ ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಇತ್ತ ಅಭಿಮಾನಿಗಳು ಅವರು ಬೇಗ ಗುಣಮುಖರಾಗಿ ಮರಳಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಭಿಮಾನಿಗಳು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
ತಮ್ಮ ನೆಚ್ಚಿನ ನಟನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆಯಲಿ. ಶಿವಣ್ಣ ಅರೋಗ್ಯ ಸುಧಾರಣೆಯಾಗಲಿ ಎಂದು ಮಲ್ಲೇಶ್ವರಂನ 13ನೇ ಅಡ್ಡ ರಸ್ತೆಯಲ್ಲಿರುವ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕರ್ನಾಟಕ ರತ್ನ ಡಾ ರಾಜ್ ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ವಿಶೇಷ ಪೂಜೆ ಹಾಗೂ ಅಭಿಷೇಕ ನಡೆಯಿತು.
ಈ ವೇಳೆ ಹಿರಿಯ ಅಭಿಮಾನಿ ಸೋಮಣ್ಣ, ಅಖಿಲ ಕರ್ನಾಟಕ ಡಾ ಶಿವರಾಜ್ ಕುಮಾರ್ ಸೇನಾ ಸಮಿತಿ ಅಧ್ಯಕ್ಷ ಟಿ.ನಾರಾಯಣ್, ಗಂಡುಗಲಿ ಡಾ. ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ.ಮಲ್ಲ, ಗೆದ್ದಲಹಳ್ಳಿ ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ರಾಜೇಂದ್ರ, ಬಿಜೆಪಿಯ ಮುಖಂಡ ಶ್ರೀಧರ, ಸಂಘದ ಸದಸ್ಯ ಶಿವಣ್ಣ, ಸಾಗರ್, ಪ.ರಾ. ರಾಘವೇಂದ್ರ ಮಲ್ಲೇಶ್ವರ, ಬೀಡಾ ಜನಾರ್ಧನ್, ಶ್ರೀರಾಂಪುರ ಮಹದೇವ್ ಸೇರಿದಂತೆ ಹಲವರಿದ್ದಾರೆ.