ಧಾರವಾಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದೆ. ಹೀಗಾಗಿ ಪ್ರವಾಹ ಉಂಟಾಗಿದೆ.
ಬೆಣ್ಣೆಹಳ್ಳ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ತೋಟದ ಮನೆಗೆ ನೀರು ನುಗ್ಗಿದೆ. ನೀರಿನ ಮಧ್ಯೆಯೇ ದಿಗ್ಬಂಧನಕ್ಕೆ ಕುಟುಂಬ ಒಳಗಾಗಿದೆ. ಇಬ್ಬರು ಮಕ್ಕಳು ಹಾಗೂ ಗಂಡ-ಹೆಂಡತಿ ಜಲ ದಿಗ್ಬಂಧನಕ್ಕೆ ಒಳಗಾಗಿದ್ದಾರೆ. ಯಮನೂರ ಗ್ರಾಮದ ಹೊರವಲಯದ ತೋಟದ ಮನೆಗೆ ನೀರು ನುಗ್ಗಿದೆ.
ನವಲಗುಂದ ತಾಲೂಕಿನ ಯಮನೂರ ಗ್ರಾಮದಲ್ಲಿ ಮಳೆಯಿಂದಾಗಿ ತೋಟದ ಮನೆಯಲ್ಲಿ ಕೆಲಸ ಮಾಡುವ ಕುಟುಂಬ ಸಿಲುಕಿಕೊಂಡಿದೆ. ಬೆಣ್ಣೆ ಹಳ್ಳ ತುಂಬಿರುವ ಹಿನ್ನೆಲೆಯಲ್ಲಿ ಏಕಾಏಕಿಯಾಗಿ ನೀರು ಹರಿದು ಬಂದಿದೆ. ಈ ಹಿನ್ನೆಲೆಯಲ್ಲಿ ಜಲದಿಗ್ಬಂಧನ ಉಂಟಾಗಿದೆ. ಹೀಗಾಗಿ ಕುಟುಂಸ್ಥರು ಹೊರಗೆ ಬಾರದೆ ಸಿಲುಕಿಕೊಂಡಿದ್ದಾರೆ. ಇಡೀ ಮನೆಯನ್ನು ನೀರು ಆವರಿಸಿಕೊಂಡಿದೆ.