ಬೆಳಗಾವಿ : ಎಲ್ಲರೂ ಊಟ ಮಾಡಿದ್ರು ಹೋದ್ರು, ಅಲ್ಲಿ ಏನು ಚರ್ಚೆಗಳಾಗಿಲ್ಲ. ಅದಕ್ಕೇನು ವಿಶೇಷ ಅರ್ಥ ಕಲ್ಪಿಸೋದು ಬೇಕಿಲ್ಲ ಎಂದು ಮಾಗಡಿ ಬಾಲಕೃಷ್ಣ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಮಾಗಡಿ ಬಾಲಕೃಷ್ಣ ಯಾರ ತಲೆಯೂ ಎಣಿಸಿಲ್ಲ,ಯಾರ ಸಹಿಯನ್ನು ಪಡೆದಿಲ್ಲ, ಎಲ್ಲಾರು ಬಂದಿದ್ದರು ಆದರೆ ಹಲವು ಕಾರಣದಿಂದ ಕೆಲವರಿಗೆ ಜನರಿಗೆ ಬರೋದಕ್ಕೆ ಆಗಿಲ್ಲ. ದೆಹಲಿಗೆ ಹೋಗೊದು ಯಾಕೆ ಎನ್ನುವುದು ನಿಮಗೆಲ್ಲ ಗೊತ್ತು. ಬಲ ಪ್ರದರ್ಶನ ಏನಿಲ್ಲ,ಅಲ್ಲಿ ಯಾರೂ ಕುಸ್ತಿ ಆಡೋಕೆ ಹೋಗಿರಲಿಲ್ಲ ಎಂದಿದ್ದಾರೆ.
ಯತೀಂದ್ರ ಹೇಳಿಕೆ ವಿಚಾರ
ಯತಿಂದ್ರ ಹೈಕಮಾಂಡ್ ಹತ್ರ ಮಾತಾಡಿರಬೇಕೆನೋ, ನನ್ನದೊಂದು ಮನವಿ ಯತಿಂದ್ರಗೆ ಮತ್ತು ಪಕ್ಷಕ್ಕೆ ಇರಿಸುಮುರುಸಾಗುತ್ತೆ ಯಾರೂ ನಾಯಕತ್ವದ ಪ್ರಶ್ನೆ ಎತ್ತೋದು ಬೇಡ, ಮಿನಿಮಮ್ ಕಾಮನ್ಸೆನ್ಸ್ ಇರಬೇಕಾಗುತ್ತೆ,ಒತ್ತಾಯ ಮಾಡೋದಲ್ಲ. ಒಬ್ಬೊಬ್ಬರಿಗೆ ಒಂದೊಂದು ಇರುತ್ತೆ ದೊಡ್ಡವರಿಗೆ ಒಂದು ನ್ಯಾಯ ಇರುತ್ತೆ ಏನ್ ಮಾಡಾಕಾಗಲ್ಲ ಎಂದು ಮಾತನಾಡಿದ್ದಾರೆ.
ಇಕ್ಬಾಲ್ ಬಹಳ ದೊಡ್ಡ ಅಧ್ಬುತ ವ್ಯಾಕ್ಯ ಹೇಳಿದ್ದಾರೆ. ಎಲ್ಲವೂ ಹೈಕಮಾಂಡ್ ತಲೆಯಲ್ಲಿದೆ. ಎಲ್ಲವೂ ಹೈಕಮಾಂಡ್ ತಿರ್ಮಾನ, ಹೈಕಮಾಂಡ್ ಕೇಳಿ ಹೇಳ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬೀದರ್ DC ಕಚೇರಿ ಸ್ಫೋಟಿಸುವುದಾಗಿ ಬೆದರಿಕೆ ಇ-ಮೇಲ್ | ಡಾಗ್ ಸ್ಕ್ವಾಡ್, ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ



















