ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2.5 ವರ್ಷ ಆದ್ರೂ ಇನ್ನೂ ಒಂದೇ ಒಂದು ಹುದ್ದೆ ಕೂಡಾ ಭರ್ತಿ ಮಾಡಿಲ್ಲ. ಡಿಸಿಎಂಗೆ ಮತ್ತು ಸಿಎಂಗೆ ಮಾತ್ರ ಉದ್ಯೋಗ ಬೇಕು, ಸಿಎಂ ಅವರಿಗೆ 5 ವರ್ಷ ಉದ್ಯೋಗ ಬೇಕು. ದುಡ್ಡು ಬರೋ ಉದ್ಯೋಗ ಇಬ್ಬರಿಗೂ ಬೇಕಿದೆ. ಆದರೆ ರಾಜ್ಯದಲ್ಲಿ 20 ಸಾವಿರ ಜನ ನಿರುದ್ಯೋಗಿಗಳು ಹೋರಾಟ ಮಾಡ್ತಿದ್ದಾರೆ. ಇದಕ್ಕೆ ನಮ್ಮ ಬೆಂಬಲ ಕೊಟ್ಟು ಹೋರಾಟದಲ್ಲಿ ಭಾಗಿಯಾಗುತ್ತಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿದೆ ಮಾತನಾಡಿದ ಅಶೋಕ್, ರಾಜ್ಯದಲ್ಲಿ 2.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇದೆ. 65 ಸಾವಿರ ಹುದ್ದೆ ಭರ್ತಿಗೆ ಆದೇಶ ನೀಡಿ 6 ತಿಂಗಳು ಆಗಿದೆ. ಆದರೂ ಇವರೆಗೂ ಒಂದೇ ಒಂದು ಹುದ್ದೆ ಕೂಡ ಭರ್ತಿ ಮಾಡಿಲ್ಲ. ಸರ್ಕಾರ ಪಾಪರ್ ಆಗಿದೆ, ಸಂಬಳ ಕೊಡೋದಕ್ಕೂ ದುಡ್ಡಿಲ್ಲ. ಎಲ್ಲೇಲ್ಲೂ ಅಭಿವೃದ್ಧಿ ಕಾರ್ಯ ನಡೀತಾ ಇಲ್ಲ. ಯುವಕರಿ ಉದ್ಯೋಗ ನೀಡುವ ಕೆಲಸ ಮಾಡಬೇಕು. ಇಲ್ಲವಾದರೆ ರಾಜ್ಯವ್ಯಾಪಿ ಹೋರಾಟಕ್ಕೆ ಕರೆ ಕೊಡ್ತೇವೆ. ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇನ್ನು, ಕೈ ಶಾಸಕರ ಪತ್ರ ವಿಚಾರ ಸಚಿವಾಕಾಂಕ್ಷಿಗಳು ಕಾದು ಕಾದು ಸುಸ್ತಾಗಿದ್ದಾರೆ. ನವೆಂಬರ್ನಲ್ಲಿ ಪುನರ್ ರಚನೆ ಮಾಡಬೇಕು ಎಂದು ಹೇಳಿದ್ದರು. ಆದರೆ ಇದ್ಯಾವುದು ಆಗಿಲ್ಲ ಅಂತ ಪತ್ರ ಬರೆದಿದ್ದಾರೆ. ಪಸ್ಟ್ ಟೈಂ ಗೆದ್ದವರ ಬೇಡಿಕೆ ಇಟ್ಟಿದ್ದಾರೆ. ಸೆಕೆಂಡ್ ಟೈಮರ್ಸ್ ಕೂಡಾ ಬೇಡಿಕೆ ಕೊಡೋದಕ್ಕೆ ರೆಡಿ ಇದ್ದಾರೆ. ಸರ್ಕಾರ ಕೋಮಾ ಸ್ಥಿತಿಗೆ ಹೋಗಿದೆ. ಶಾಸಕರು ವಿದೇಶಿ ಪ್ರವಾಸಕ್ಕೆ ಕೆಲಸ ಇಲ್ಲ ಅಂತ ಹೋಗಿದ್ದಾರೆ. ರಾಜ್ಯದ ಪರಿಸ್ಥಿತಿ ಸರಿ ಇಲ್ಲ, ಸರ್ಕಾರವನ್ನ ಐಸಿಯುನಲ್ಲಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಹೆಚ್.ಸಿ.ಮಹದೇವಪ್ಪ ಅವರ ದಲಿತ ಸಿಎಂ ವಿಚಾರವಾಗಿ ಮಾತನಾಡಿ, ಪಕ್ಷದವರಿಗೆ ಬೀದಿ ನಾಯಿಗಳನ್ನ ಹಿಡಿದು ಒಳಗೆ ಹಾಕಬೇಕು ಅಂತಿದ್ದಾರೆ. ಹುಚ್ಚುಚ್ಚಾಗಿ ಮಾತನಾಡಲು ಕೆಲವರು ಶುರು ಮಾಡಿದ್ದಾರೆ. ದಲಿತ ಸಿಎಂ ಮಾಡಬೇಡಿ ಎಂದು ಯಾರೂ ಹೇಳಿಲ್ಲ, ಮಾಡಿ. ದಲಿತರ ಪರ ಅಂತ ಹೇಳಿದ್ದಾರೆ ಸಿದ್ದರಾಮಯ್ಯ, ಕೂಡಲೇ ಮಾಡಿ ತೋರಿಸಿ. ರಾಜ್ಯದಲ್ಲಿ ಇದುವರೆಗೂ ಸಿಎಂ ಆದವರು ಜಾತಿ ಹೆಸರಲ್ಲಿ ಆಗಿಲ್ಲ. ಪಸ್ಟ್ ಟೈಂ ಸಿದ್ದರಾಮಯ್ಯ ಜಾತಿ ಕಾರ್ಡ್ ಪ್ಲೇ ಮಾಡ್ತಿದ್ದಾರೆ. ಎಲ್ಲಾ ಜಾತಿಗಳ ಜೊತೆ ಕೆಲಸ ಮಾಡೋದು ಬಿಟ್ಟು, ಜಾತಿ ಹೆಸರಲ್ಲಿ ಟ್ವೀಟ್ ಮಾಡಿದ್ದಾರೆ. ಹೈಕಮಾಂಡ್ ಮನೆ ಖಾಲಿ ಮಾಡಲು ಮೆಸೇಜ್ ಕೊಟ್ಟಿರಬೇಕು. ಅದಕ್ಕೆ ಸಿದ್ದರಾಮಯ್ಯ ಈ ರೀತಿ ಮಾತನಾಡುತ್ತಿದ್ದಾರೆ. ಇದೇ ಕಾರಣಕ್ಕೆ ಜಾತಿ ನಾಟಕ ಆಡುತ್ತಿದ್ದಾರೆ.ಸದ್ದರಾಮಯ್ಯ ಮಾನಸಿಕ ಸ್ಥಿತಿಯನ್ನ ಕಳ್ಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮಂಡ್ಯದಲ್ಲಿ ಅಮಾನುಷ ಕೃತ್ಯ | ಲವ್ ಮ್ಯಾರೇಜ್ಗೆ ಸಪೋರ್ಟ್ ಮಾಡಿದಕ್ಕೆ ವ್ಯಕ್ತಿ ಮೇಲೆ ಕಲ್ಲು ಎತ್ತಿ ಹಾಕಿ ಕ್ರೌರ್ಯ !



















