ಯಾದಗಿರಿ : ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ದದ ಹಿನ್ನೆಲೆ ಯಾದಗಿರಿಯಲ್ಲಿರುವ ಇಂದಿರಾ ಕ್ಯಾಂಟಿನ್ಗೂ ಅದರ ಎಫೆಕ್ಟ್ ತಟ್ಟಿದೆ.
ನಗರದ ಇಂದಿರಾ ಕ್ಯಾಂಟಿನ್ನಲ್ಲಿ LPG ಸಿಲಿಂಡರ್ ಕೊರತೆ ಉಂಟಾದ ಹಿನ್ನೆಲೆ ಕ್ಯಾಂಟಿನ್ ಸಿಬ್ಬಂದಿಗಳು ಸೌದಿ ಮೊರೆ ಹೋಗಿದ್ದಾರೆ. ಸಿಲಿಂಡರ್ ಇಲ್ಲದಕ್ಕಾಗಿ ಅಡುಗೆ ಮಾಡಲು ಸೌದೆ ಖರೀದಿ ಮಾಡಿದ ಸಿಬ್ಬಂದಿಗಳು, ಒಲೆಯಲ್ಲೇ ಅನ್ನ, ಸಾಂಬಾರ್ ಮಾಡುತ್ತಿದ್ದಾರೆ.
ದಿನ ನಿತ್ಯವೂ 500ಕ್ಕೂ ಹೆಚ್ಚು ಕೂಲಿ ಕಾರ್ಮಿಕ ವರ್ಗ, ಬಡವರು ಕಡಿಮೆ ದರದಲ್ಲಿ ಊಟ ಮಾಡ್ತಾರೆ. ಕಾರ್ಮಿಕ ವರ್ಗ ಹಸಿವಿನಿಂದ ಬಳಲಬಾರದೆಂದು ಸೌದೆ ಬಳಕೆ ಮಾಡಿ ಹಸಿವು ನಿಗಿಸುವ ಕಾರ್ಯವನ್ನು ಇಂದಿರಾ ಕ್ಯಾಂಟಿನ್ ಸಿಬ್ಬಂದಿಗಳು ಮಾಡುತ್ತಿದ್ದಾರೆ.
ಇದನ್ನೂ ಓದಿ : ಐಪಿಎಲ್ನಲ್ಲಿ ಆಸಕ್ತಿ ಇದ್ದರೆ ಕಾಸು ಕೊಟ್ಟು ನೋಡಲಿ, ಟಿಕೆಟ್ ಕೇಳಿರುವುದು ತಪ್ಪು | ಡಿ.ಕೆ ಸುರೇಶ್


















