ಕೋಲಾರ: ಇತ್ತೀಚಿನ ದಿನಗಳಲ್ಲಿ ಯುವಕರ ಹುಚ್ಚಾಟಗಳಿಗೆ ಮಿತಿಯೇ ಇಲ್ಲದಂತಾಗಿದೆ. ತಮ್ಮ ಹುಚ್ಚಾಟಗಳಿಂದಲೇ ಸಾವಿನ ಮನೆಯ ಕದವನ್ನು ಸಹ ತಟ್ಟುತ್ತಿದ್ದಾರೆ.
ಹೌದು! ಇಲ್ಲೊಬ್ಬ ಯುವಕ ಮದ್ಯ ಸೇವನೆ ಪೈಪೋಟಿಗೆ ಇಳಿದು ಅತಿಯಾಗಿ ಮದ್ಯಪಾನ ಸೇವಿಸಿ ಸಾವನ್ನಪ್ಪಿದ್ದಾನೆ. ಈ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಕಾರ್ತೀಕ್ (21) ಸಾ ಮೃತ ದುರ್ದೈವಿ. ಮದ್ಯ ಸೇವಿಸುವ ಕುರಿತು ಪಂದ್ಯ ಕಟ್ಟಿದ್ದಾರೆ. ಕಾರ್ತಿಕ್, ವೆಂಕಟರೆಡ್ಡಿ ಎಂಬಾತನೊಂದಿಗೆ 10 ಸಾವಿರ ರೂ.ಗೆ ಪಂದ್ಯ ಕಟ್ಟಿದ್ದಾನೆ. ಇದನ್ನೇ ಒಣ ಪ್ರತಿಷ್ಠೆಯಾಗಿ ಸ್ವೀಕರಿಸಿದ ಕಾರ್ತಿಕ್ ಐದಾರು ಬಾಟಲ್ ಮಧ್ಯ ಕುಡಿದಿದ್ದಾನೆ ಎನ್ನಲಾಗಿದೆ.
ಹೆಚ್ಚು ಮದ್ಯ ಸೇವಿಸುತ್ತಿದ್ದಂತೆ ಕಾರ್ತಿಕ್ ಅಸ್ವಸ್ಥನಾಗಿದ್ದಾನೆ. ಹೀಗಾಗಿ ಕೂಡಲೇ ಆತನನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಆದರೂ ಚಿಕಿತ್ಸೆ ಫಲಕಾರಿಯಾಗದೆ ಕಾರ್ತಿಕ್ ಸಾವನ್ನಪ್ಪಿದ್ದಾನೆ. ಪಂದ್ಯ ಕಟ್ಟಿದ್ದ ವೆಂಕಟರೆಡ್ಡಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮೃತನ ಸಂಬಂಧಿಕರು ಒತ್ತಾಯಿಸಿದ್ದಾರೆ.