ನರಗುಂದ ಪುಣ್ಯಾರಣ್ಯ ಪತ್ರೀವನಮಠದ ಡಾ. ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ನುಡಿ
ಧಾರವಾಡ : ಶಾಲಾ ಶಿಕ್ಷಣ ಇಲಾಖೆಯ ಡಿ.ಡಿ.ಪಿ.ಐ. ವೃಂದದ ಹುದ್ದೆಯಿಂದ ಸೇವಾ ನಿವೃತ್ತಿ ಹೊಂದಿರುವ ಡಾ.ಗುರುನಾಥ ಹೂಗಾರ ಅವರು ಪಾರದರ್ಶಕ ಬದ್ಧತೆಯ ಶ್ರೇಷ್ಠ ಆಡಳಿತಗಾರರಾಗಿ ಗುರುತಿಸಿಕೊಂಡಿದ್ದರು ಎಂದು ನರಗುಂದ ಪುಣ್ಯಾರಣ್ಯ ಪತ್ರೀವನಮಠದ ಡಾ. ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ನಗರ ಟಿ.ಸಿ.ಡಬ್ಲೂ. ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಡಾ.ಗುರುನಾಥ ಹೂಗಾರ ಅವರನ್ನು ಗೌರವಿಸಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು. ಸುಮಾರು 30 ವರ್ಷಗಳ ತಮ್ಮ ಸುದೀರ್ಘ ಸೇವೆಯಲ್ಲಿ ಒಂದೂ ಕಪ್ಪುಚುಕ್ಕೆ ಇಲ್ಲದಂತೆ ಶುಭ್ರನೆಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ರಾಜ್ಯದ ಮಾಜಿ ಸಚಿವ ಬಿ.ಆರ್. ಯಾವಗಲ್ಲ ಮಾತನಾಡಿ, ಸೇವೆಗೈದ ಹುದ್ದೆಗಳಿಗೆ ಗೌರವ ಬರುವಂತೆ ತಮ್ಮ ಪಾಲಿನ ಸೇವೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಇಂದಿನ ಖಾಸಗೀ ಶಿಕ್ಷಣ ಸಂಸ್ಥೆಗಳ ಪೈಪೋಟಿಯಲ್ಲಿಯೂ ಸರಕಾರಿ ಶಾಲೆಗಳಿಗೆ ಜೀವತುಂಬುವ ಕೆಲಸವನ್ನು ಡಾ.ಗುರುನಾಥ ಹೂಗಾರ ಮಾಡಿದ್ದಾರೆ ಎಂದು ಹೇಳಿದರು.
ಕವಿವಿ ಶಿಕ್ಷಣ ಮಾಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ. ಆರ್.ಟಿ. ಜಂತ್ಲಿ ಮಾತನಾಡಿ, ಡಾಕ್ಟರೇಟ್ ಸೇರಿದಂತೆ ಹಲವಾರು ಪದವಿ, ಡಿಪ್ಲೋಮಾ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದಿರುವ ಡಾ.ಹೂಗಾರ ನನ್ನ ಶಿಷ್ಯನಾಗಿದ್ದು, ತನ್ನ ಕ್ರಿಯಾಪ್ರೇರಕ ವ್ಯಕ್ತಿತ್ವದೊಂದಿಗೆ ಸಾಧನೆಯ ಹಾದಿಯಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಅಧ್ಯಕ್ಷತೆವಹಿಸಿದ್ದರು. ಟಿ.ಸಿ.ಡಬ್ಲೂ. ಪ್ರಾಚಾರ್ಯ ಡಾ.ರವಿಕುಮಾರ ಬಾರಾಟಕ್ಕೆ, ತಹಶೀಲದಾರ ಡಿ.ಎಚ್.ಹೂಗಾರ, ಅಭಿನಂದನಾ ಸಮಿತಿ ಅಧ್ಯಕ್ಷ ಎಚ್.ಎಚ್. ಮೇಟಿ, ಕಾರ್ಯದರ್ಶಿ ಡಾ.ಎನ್.ಎಚ್. ಪೂಜಾರ, ಆರ್.ಎಸ್. ಮುಳ್ಳೂರ, ಎಸ್.ಬಿ.ಕೊಡ್ಲಿ, ಕೆ.ಜಿ.ದೇವರಮನಿ, ಪ್ರಭಯ್ಯ ಚಿಕ್ಕಮಠ, ರವಿ ಶೆಟ್ಟೆಪ್ಪನವರ, ಎಸ್.ಎಂ. ಹುಡೇದಮನಿ, ವಿಜಯಲಕ್ಷಿö್ಮ ಹಂಚಿನಾಳ, ರೂಪಾ ಪುರಮಕರ, ನಫೀಜಾಬಾನು ದಾವಲಸಾಬನವರ, ಡಾ.ದೇವೇಂದ್ರಪ್ಪ ಹೂಗಾರ, ಮಂಜುನಾಥ ಹೂಗಾರ, ಗಿರೀಶ ಹಂಪಣ್ಣವರ, ಶಿವಾನಂದ ಹೂಗಾರ, ಸತೀಶ ಕುಲಕರ್ಣಿ, ಮಲ್ಲಪ್ಪ ಹೂಗಾರ, ಶಿವಪ್ಪ ಹೂಗಾರ ಇದ್ದರು.
ಗುರುಮೂರ್ತಿ ಯರಗಂಬಳಿಮಠ ಸ್ವಾಗತಿಸಿದರು. ಮಂಜುಳಾ ಹೂಗಾರ ವಂದಿಸಿದರು. ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಡಾ.ಗುರುನಾಥ ಹೂಗಾರ ಹಾಗೂ ಚೆನ್ನಮ್ಮ ಹೂಗಾರ ಅವರನ್ನು ಗೌರವಿಸಲಾಯಿತು.
ಧಾರವಾಡ ಟಿ.ಸಿ.ಡಬ್ಲೂ. ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಡಿಡಿಪಿಐ ಡಾ.ಗುರುನಾಥ ಹೂಗಾರ ದಂಪತಿಗಳನ್ನು ಅಭಿನಂದಿಸಿ ಗೌರವಿಸಲಾಯಿತು. ನರಗುಂದ ಪುಣ್ಯಾರಣ್ಯ ಪತ್ರೀವನಮಠದ ಶ್ರೀಗಳು, ಮಾಜಿ ಸಚಿವ ಬಿ.ಆರ್. ಯಾವಗಲ್ಲ, ಶಿವಶಂಕರ ಹಿರೇಮಠ, ಡಾ. ಆರ್.ಟಿ.ಜಂತ್ಲಿ, ಡಾ. ರವಿಕುಮಾರ ಬಾರಾಟಕ್ಕೆ, ಆರ್.ಎಸ್. ಮುಳ್ಳೂರ, ಗುರುಮೂರ್ತಿ ಯರಗಂಬಳಿಮಠ, ಶಿವಾನಂದ ಹೂಗಾರ ಇತರರು ಇದ್ದರು.