ಕೆಡಿ ಚಿತ್ರದ ಮೊದಲ ಶಿವ ಶಿವ ಹಾಡು ಡಿ. 24ರಂದು ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಹಾಡು ಬಿಡುಗಡೆಯಾಗುವ ಕುರಿತು ಚಿತ್ರ ತಂಡವು ಅಪ್ಡೇಟ್ ನೀಡಿದೆ.
ಜೋಗಿ ಪ್ರೇಮ್ ಈ ಚಿತ್ರದ ನಿರ್ದೇಶನ ಮಾಡಿದ್ದು, ಧ್ರುವ ಸರ್ಜಾ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಅದರ ಹಾಗೂ ಸಿನಿಮಾ ಕುರಿತು ಮಾಹಿತಿ ನೀಡಲು ಚಿತ್ರತಂಡ ಮಾಧ್ಯಮದೆದುರು ಬಂದಿತ್ತು. ಈ ಚಿತ್ರವು ಡಿಸೆಂಬರ್ನಲ್ಲಿ ತೆರೆಗೆ ಬರಬೇಕಿತ್ತು. ಆದರೆ, ಹಲವಾರು ಕಾರಣಾಂತರಗಳಿಂದಾಗಿ ಬಿಡುಗಡೆಯಾಗಗಲಿಲ್ಲ. ಈಗ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಚಿತ್ರದಲ್ಲಿ ಕೆಡಿ ಅಲಿಯಾಸ್ ಕಾಳಿದಾಸನಾಗಿ ಧ್ರುವ ಸರ್ಜಾ ಅವರು ಕಾಣಿಸಿಕೊಳ್ಳಲಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ.
ಮುಂದಿನ ವರ್ಷದ ಪ್ರಾರಂಭದಲ್ಲಿ ಚಿತ್ರ ತೆರೆಗೆ ಬರಲಿದೆ ಎಂದರು ಪ್ರೇಮ್. ‘ಮಾತಿನ ಭಾಗ ಮುಗಿದಿದೆ. ಎರಡು ಹಾಡುಗಳ ಚಿತ್ರೀಕರಣ ಬಾಕಿಯಿದೆ. ಡಿ.24ರಂದು ಚಿತ್ರದ ‘ಶಿವ ಶಿವ’ ಹಾಡು ಬಿಡುಗಡೆಯಾಗುತ್ತಿದೆ. ತಾಂತ್ರಿಕವಾಗಿ ಅದ್ದೂರಿಯಾಗಿರುವ ಜನಪದ ಶೈಲಿಯ ಹಾಡಿದು. ಈ ಹಾಡಿನಲ್ಲಿ 300ಕ್ಕೂ ಅಧಿಕ ಟ್ರ್ಯಾಕ್ಗಳಿದ್ದು ವಿವಿಧ ದೇಶಗಳ ವಾದ್ಯಗಳನ್ನು ಬಳಸಿಕೊಂಡಿದ್ದೇವೆ. ಕಾಳಿದಾಸ ನಾಯಕನ ಹೆಸರಷ್ಟೆ. ಇದು ಯಾವ ವ್ಯಕ್ತಿಗೂ ಸಂಬಂಧಿಸಿದ ಕಥೆಯಲ್ಲ. 1970ರ ದಶಕದ ರೌಡಿಸಂ ಹಿನ್ನೆಲೆಯ ಕಥೆ. ಗ್ರಾಫಿಕ್ಸ್ ಕೆಲಸದಿಂದ ಚಿತ್ರ ವಿಳಂಬವಾಗಿದೆ’ ಎಂದರು.
ದರ್ಶನ್ ಜೊತೆಗೊಂದು ಸಿನಿಮಾವನ್ನು ಪ್ರೇಮ್ ಘೋಷಿಸಿದ್ದರು. ಆದರೆ ಆ ಸಿನಿಮಾ ಸದ್ಯಕ್ಕೆ ನಿಂತಂತೆ ತೋರುತ್ತಿದೆ. ‘ದರ್ಶನ್ ಈಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಅವರು ಒಪ್ಪಿಕೊಂಡು ಸಿನಿಮಾಗಳಿವೆ. ಜೊತೆಗೆ ‘K.D’ ಕೆಲಸಗಳು ಸಾಕಷ್ಟಿವೆ. ಹೀಗಾಗಿ ಸದ್ಯಕ್ಕೆ ಅವರ ಜೊತೆಗೆ ಚಿತ್ರ ಪ್ರಾರಂಭಿಸುವುದಿಲ್ಲ’ ಎಂದು ಮಾಹಿತಿ ನೀಡಿದರು. ಚಿತ್ರದಲ್ಲಿ ಡೈಲಾಗ್ಗಳನ್ನು ನಿರೀಕ್ಷೆ ಮಾಡುತ್ತಾರೆ. ಫ್ಯಾಮಿಲಿ ಕೇಂದ್ರಿತ ವಿಷಯಗಳನ್ನು ಬಯಸುತ್ತಾರೆ. ಅಂಥ ಸ್ಕ್ರಿಪ್ಟ್ಗಳನ್ನು ಆಯ್ದುಕೊಳ್ಳುವೆ. ‘ಮಾರ್ಟಿನ್’ ತಂಡದ ಜೊತೆಗೆ ‘ರೈನೋ’ ಚಿತ್ರ ಮಾಡುವುದು ಖಚಿತ. ಆದರೆ ಸ್ವಲ್ಪ ತಡವಾಗಲಿದೆ. ಒಂದೆರಡು ಸಿನಿಮಾಗಳನ್ನು ಮುಗಿಸಿ ಆ ಸಿನಿಮಾ ಕೈಗೆತ್ತಿಕೊಳ್ಳುವೆ’ ಎನ್ನುತ್ತಾರೆ ಧ್ರುವ ಸರ್ಜಾ. ‘
‘ಸುಮಾರು 50–60 ಕಥೆ ಕೇಳಿರುವೆ. ಅದರಲ್ಲಿ ಉತ್ತಮವಾಗಿದ್ದನ್ನು ಮಾಡುವೆ. ನಿರ್ದೇಶಕರು ಹೊಸಬರಾಗಿರಲಿ, ಹಳೆಬರಾಗಿರಲಿ. ಕಥೆ ಮನರಂಜಿಸುವಂತಿರಬೇಕು. ಮುಂದಿನ ವರ್ಷ ನನ್ನ ಎರಡು ಸಿನಿಮಾಗಳು ಬಿಡುಗಡೆಯಾಗುತ್ತವೆ. ಇನ್ನು ಮುಂದೆ ವರ್ಷಕ್ಕೆ ಎರಡು ಸಿನಿಮಾ ಖಂಡಿತವಾಗಿ ಮಾಡುತ್ತೇನೆ. ನಮ್ಮದೇ ನಿರ್ಮಾಣ ಸಂಸ್ಥೆಯಿಂದ ಅರ್ಜುನ್ ಸರ್ಜಾ ಜೊತೆ ಒಂದು ಸಿನಿಮಾದ ಮಾತುಕತೆ ನಡೆಯುತ್ತಿದೆ. ಅದನ್ನು ಶೀಘ್ರದಲ್ಲಿ ಘೋಷಿಸುತ್ತೇವೆ. K.D ಬಿಡುಗಡೆಯಾಗುತ್ತಿದ್ದಂತೆ ಇನ್ನೊಂದು ಸಿನಿಮಾ ಸೆಟ್ಟೇರಿರುತ್ತದೆ ಎಂಬ ಭರವಸೆ ನೀಡುತ್ತೇನೆ.
ಖಂಡಿತವಾಗಿ ನನ್ನಿಂದ ಒಳ್ಳೆ ಸಿನಿಮಾಗಳನ್ನು ನಿರೀಕ್ಷಿಸಬಹುದು’ ಎಂದು ತಮ್ಮ ಮುಂದಿನ ಯೋಜನೆಗಳ ಮಾಹಿತಿ ಹಂಚಿಕೊಂಡರು.
‘ನಟನಾಗಿ‘ಮಾರ್ಟಿನ್’ ಚಿತ್ರದ ಬಳಿಕ ನನ್ನ ವೃತ್ತಿಯಲ್ಲಿ ಏನೂ ವ್ಯತ್ಯಾಸವಾಗಿಲ್ಲ. ಪ್ರತಿ ಸಿನಿಮಾದಲ್ಲಿಯೂ ಒಂದಷ್ಟು ಕಲಿಯುತ್ತೇವೆ. ಜನ ಏನು ಇಷ್ಟವಾಯಿತು, ಏನು ಇಷ್ಟವಾಗಿಲ್ಲ ಎಂದು ತಿಳಿಸುತ್ತಾರೆ. ಪ್ರೇಕ್ಷಕರಿಗೆ ಇಷ್ಟವಾಗಿದ್ದನ್ನು ನೀಡುವುದು ನನ್ನ ಕರ್ತವ್ಯ. ಅದನ್ನು ನೀಡಲು ಪ್ರಯತ್ನಿಸುತ್ತೇನೆ’ ಎನ್ನುತ್ತಾರೆ ಅವರು.