ಬೆಂಗಳೂರು: ಮೊದಲ ಹಂತದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಾಗದವರು ಮತ್ತು ಅನುತ್ತೀರ್ಣರಾದವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಅದರಂತೆ ಪರೀಕ್ಷೆಗೆ ಈಗಿನಿಂದಲೇ ಶಿಕ್ಷಣ ಮಂಡಳಿ ತಯಾರಿ ನಡೆಸಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಬಾರಿಯೂ ಒಟ್ಟು ಮೂರು ಬಾರಿ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಅಷ್ಟೇ ಅಲ್ಲಾ ಈ ಪರೀಕ್ಷೆಗಳನ್ನು ಶುಲ್ಕರಹಿತವಾಗಿ ನಡೆಸುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಯಾವ ವಿದ್ಯಾರ್ಥಿಯನ್ನೂ ಅನುತ್ತೀರ್ಣ ಅನ್ನೋದಕ್ಕೆ ಬರುವುದಿಲ್ಲ. ಈ ಬಾರಿಯೂ ಇನ್ನೇರಡು ಅವಕಾಶಗಳನ್ನು ಕಲ್ಪಿಸಲಾಗಿದೆ. ಹೀಗಾಗಿ ಅಂಥಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಅಂತಾ ಹೇಳಿದ್ದಾರೆ. ಎರಡನೇ ಪರೀಕ್ಷೆ 24-04-2025 ರಿಂದ 08-05-2205 ರವರೆಗೆ ನಡೆಯಲಿದ್ದು, ಮೂರನೇ ಪರೀಕ್ಷೆ 09-06-2025 ರಿಂದ 21 – 06-2025 ರವರೆಗೆ ನಡೆಯಲಿದೆ ಎಂದು ಹೇಳಿದ್ದಾರೆ.