ನಂದಿ ಬೆಟ್ಟದಿಂದ ವಿಧಾನಸೌಧಕ್ಕೆ ಸಂಪುಟಸಭೆ ಸ್ಥಳಾಂತರವಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ದ ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಿಂದಾಗಿ ಸಾರ್ವಜನಿಕರ ಕೋಟ್ಯಾಂತರ ರೂಪಾಯಿ ತೆರಿಗೆ ನಷ್ಟ ಆಗಿದೆ. ಜಿಲ್ಲೆಯಲ್ಲಿ ಸಭೆ ನಡೆಯುವುದರಿಂದ ಎಲ್ಲ ಸಮಸ್ಯೆಗಳು ಈಡೇರಬಹುದು ಎಂದು ನನಗೆ ಸಂತೋಷವಾಗಿತ್ತು. ಹೀಗಾಗಿ ನಾನು ಖುಷಿ ಪಟ್ಟಿದ್ದೆ ಎಂದಿದ್ದಾರೆ.
ಸರ್ಕಾರವು ಎತ್ತಿನಹೊಳೆ, ಕೆಸಿವ್ಯಾಲಿ, ನೀರಾವರಿ ಬಗ್ಗೆ ಗಮನ ಹರಿಸಬೇಕು. ಕೋಲಾರ ಚಿಕ್ಕಬಳ್ಳಾಪುರ ಜನರಿಗೆ ಕನಿಷ್ಟ ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಸರ್ಕಾರಕ್ಕೆ ಸೀಕಲ್ ರಾಮಚಂದ್ರಗೌಡ ಆಗ್ರಹಿಸಿದ್ದಾರೆ.