ಬೆಂಗಳೂರು ಗ್ರಾಮಾಂತರ: ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ದಂಪತಿ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಕೂಡ ಇದ್ದರು.
ಇಂದು ಬೆಳ್ಳಂಬೆಳಗ್ಗೆ ಕುಟುಂಬ ಸಮೇತರಾಗಿ ನರಸಿಂಹ ಸಮೇತ ಘಾಟಿ ಸುಬ್ರಮಣ್ಯನ ದರ್ಶನವನ್ನು ಡಿಕೆಶಿ ಮಾಡಿದ್ದಾರೆ. ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ನಾಗದೋಷ, ಕುಜದೋಷ ಸೇರಿದಂತೆ ಸರ್ಪ ಸಂಸ್ಕಾರಕ್ಕೆ ಪ್ರಸಿದ್ದಿಯಾದ ದೇವಾಲಯವಾಗಿದೆ. ಈ ವೇಳೆ ಪೂರ್ಣಕುಂಭ ಮತ್ತು ವಾದ್ಯದೊಂದಿಗೆ ಡಿಕೆಶಿಗೆ ಸ್ವಾಗತ ಕೋರಲಾಯಿತು.
ಅಧಿಕಾರಿಗಳು ದೇವಾಲಯದ ಆಡಳಿತ ಮಂಡಳಿ ಮತ್ತು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು. ಡಿಕೆಶಿ ಅರ್ಧಗಂಟೆ ಪೂಜೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ವಿಶೇಷ ಪೂಜೆ ನೆರವೇರಿಸಲಾಯಿತು.