ರಾಮನಗರ: ಡಿ.ಕೆ. ಸುರೇಶ್ ಹೆಸರು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪವಿತ್ರ ಎಂಬ ಮಹಿಳೆಯಿಂದ ಡಿ.ಕೆ.ಸುರೇಶ್ ಹೆಸರು ದುರ್ಬಳಕೆಯಾಗಿದೆ. ಸಮಾಜದಲ್ಲಿ ಭದ್ರತೆಗಾಗಿ ಅವರ ಹೆಸರನ್ನು ಬಳಕೆ ಮಾಡಿದ್ದಾರೆ.
ಅವರ ಪಾನ್ ಆಧಾರ್ ಸಹ ನಕಲಿಯಾಗಿದೆ. ಮೂಲತಃ ದೊಡ್ಡಾಲಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ. ತನಗೆ ಭದ್ರತೆ ಸಿಗುವ ಆಲೋಚನೆಯಿಂದ ಡಿ.ಕೆ.ಸುರೇಶ್ ಹೆಸರನ್ನು ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಮಹಿಳೆಯನ್ನು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ.