ಚಿಕ್ಕಮಗಳೂರು: ಕರ್ತವ್ಯ ಲೋಪ ಎಸಗಿದ್ದ ಜಿಲ್ಲಾ ವಕ್ಫ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಕೋರ್ಟ್ ಆದೇಶವಿದೆ ಎಂದು ಸ್ಥಳೀಯ ಆಡಳಿತದ ಗಮನಕ್ಕೆ ಮಾಹಿತಿ ನೀಡಿದೆ ಮಠದ ಜಾಗವನ್ನು ಮಸೀದಿ ಸದಸ್ಯರು ತೆರವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಸತ್ತಾರ್ ಷಾ ಹುಸೇನ್ ನನ್ನು ಅಮಾನತು ಮಾಡಲಾಗಿದೆ
ಮಾ.5 ರಂದು ಜಿಲ್ಲೆಯ ಹನುಮಂತಪ್ಪ ವೃತ್ತದ ಹತ್ತಿರ ನಲ್ಲೂರು ಮಠದ ವಿವಾದಿತ ಜಾಗದಲ್ಲಿ ಮುಸ್ಲಿಂ ಸಮುದಾಯದ ಜನರು ಏಕಾಏಕಿ ಹೋಟೆಲ್, ಅಂಗಡಿಗಳನ್ನು ತೆರವು ಮಾಡಿದ್ದರು. ಈ ಹಿನ್ನೆಲೆ ವಕ್ಫ್ ಅಧಿಕಾರಿ ಸೇರಿದಂತೆ 14 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ವಕ್ಫ್ ಬೋರ್ಡ್ (State Waqf Board) ಸಿಇಓ ಜೀಲಾನಿ ಹೆಚ್ ಮೊಕಾಶಿಯವರು ಚಿಕ್ಕಮಗಳೂರು (Chikkamagaluru) ಜಿಲ್ಲಾ ವಕ್ಫ್ ಅಧಿಕಾರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಹನುಮಂತಪ್ಪ ವೃತ್ತದ ಬಳಿಯ ಮಠದ ಜಾಗವನ್ನು ಬಡಾಮಕಾನ್ ಜಾಮಿಯ ಮಸೀದಿ ಕಮಿಟಿಯ ಸದಸ್ಯರು ಕೋರ್ಟ್ ಆದೇಶವಿದೆ ಎಂದು ಸ್ಥಳೀಯ ಆಡಳಿತದ ಗಮನಕ್ಕೆ ತರದೆ ತೆರವು ಮಾಡಿದ್ದರು.
250ಕ್ಕೂ ಹೆಚ್ಚು ಅನ್ಯಕೋಮಿನ ಯುವಕರು ನಗರಸಭೆ ಗಮನಕ್ಕೆ ತರದೆ ಜೆಸಿಬಿ ತಂದು ಮಾ.5 ರಂದು ಮನೆ, ಹೋಟೆಲ್ ಹಾಗೂ ಕಟ್ಟಡವನ್ನ ತೆರವು ಮಾಡಿದ್ದರು. ಈ ಬಗ್ಗೆ ನಲ್ಲೂರು ಮಠದ ವಂಶಸ್ಥರು, ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.