ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತದ ದುರಂತ ಕೇಸ್ ಸರ್ಕಾರದ ಬುಡಕ್ಕೆ ಬಂದಿದೆ. ವಿಧಾನಸೌಧದ ಮುಂದೆ ಕಾರ್ಯಕ್ರಮ ಆಯೋಜಿಸಿ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದೆ. ಇಂಥಹ ಸಮಯದಲ್ಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮೇಲೆ ಗರಂ ಆಗಿದ್ದಾರೆ ಅಂತಾ ಹೇಳಲಾಗುತ್ತಿದೆ.
ಐಪಿಎಲ್ ಕಪ್ ಗೆದ್ದ ಆರ್ಸಿಬಿ ತಂಡವನ್ನು ಹೆಚ್ಎಎಲ್ಗೆ ತೆರಳಿ ಡಿಸಿಎಂ ಡಿಕೆಶಿ ಖುದ್ದಾಗಿ ಬರ ಮಾಡಿಕೊಂಡಿದ್ದರು. ಕಳೆದ ಸಂಪುಟ ಸಭೆಯ್ಲಲಿ ಈ ವಿಷಯವನ್ನು ಪ್ರಸ್ತಾಪಿಸಿ ಡಿ.ಕೆ. ಶಿವಕುಮಾರ್ ರನ್ನು ಸಿಎಂ ತರಾಟೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ʻನೀವು ಯಾಕೆ ಹೆಚ್ಎಎಲ್ಗೆ ಹೋಗಿದ್ರಿ.?. ನೀವು ಅಲ್ಲಿಗೆ ಹೋಗಿದ್ದಕ್ಕೆ ಸ್ಟೇಡಿಯಂನಲ್ಲಿ ಸರ್ಕಾರವೇ ಕಾರ್ಯಕ್ರಮ ಆಯೋಜಿಸಿತ್ತು ಅನ್ನೋ ರೀತಿಯಲ್ಲಿ ಮಾಧ್ಯಮಗಳು ಮಾತನಾಡುತ್ತಿವೆ. ಅಲ್ಲಿಗೆ ನೀವು ಹೋಗಬೇಕಾದ ಶಿಷ್ಠಾಚಾರ ಏನಾದ್ರೂ ಇತ್ತಾ? ನೀವ್ಯಾಕೆ ಅಲ್ಲಿಗೆ ಹೋಗಬೇಕಿತ್ತು ಅಂತಾ ಡಿಕೆಶಿಗೆ ಸಿಎಂ ಸಿದ್ದು ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
11 ಜನ ಆರ್ಸಿಬಿ ಅಭಿಮಾನಿಗಳು ಕಾಲ್ತುಳಿತದಲ್ಲಿ ಮೃತಪಟ್ಟ ಬಳಿಕ ಐಪಿಎಸ್ ಅಧಿಕಾರಿಗಳನ್ನ ಸೇರಿ ಹಲವರನ್ನು ಸರ್ಕಾರ ಸಸ್ಪೆಂಡ್ ಮಾಡಿದೆ. ಜೊತೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಗೋವಿಂದ ರಾಜು ಅವರನ್ನು ಸಿಎಂ ಕಿಕ್ ಔಟ್ ಮಾಡಿದ್ದಾರೆ. ʻಕಾಲ್ತುಳಿತದ ಪ್ರಕರಣದಲ್ಲಿ ಸರ್ಕಾರದ್ದೇನೂ ತಪ್ಪಿಲ್ಲʼ ಅಂತಾ ರಾಜ್ಯದ ಜನ್ರನ್ನ ನಂಬಿಸಲು ಸರ್ಕಾರ ಇನ್ನಿಲ್ಲದಂತೆ ಪ್ರಯತ್ನಿಸ್ತಿರೋದು ಮೇಲ್ನೋಟಕ್ಕೆ ಕ್ಲಿಯರ್ ಆಗಿ ಗೊತ್ತಾಗುತ್ತಿದೆ.