ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಅಸಹಜ ಸಾವಿಗೀಡಾದ ಶವಗಳನ್ನು ಅಲ್ಲಿನ ಸುತ್ತಮುತ್ತ ಪ್ರದೇಶಗಳಲ್ಲಿ ಹೂತಿದ್ದೇನೆ ಎಂಬ ಸಾಕ್ಷಿ ದೂರುದಾರ ನೀಡಿದ ದೂರಿನ ಮೇಲೆ ಎಸ್.ಐ.ಟಿ ತನಿಖೆ ನಡೆಸುತ್ತಿದೆ. ತನಿಖೆಯ ಭಾಗವಾಗಿ ಸಾಕ್ಷಿ ದೂರುದಾರ ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಾಸವಿದ್ದ ಸ್ಥಳವನ್ನು ಮಹಜರು ಮಾಡಲಾಗಿದೆ.
ಸಾಕ್ಷಿ ದೂರುದಾರ ವ್ಯಕ್ತಿ ಈ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ವಾಸವಾಗಿದ್ದಾಗ ಆತ ಉಳಿದುಕೊಂಡಿದ್ದ ಎನ್ನಲಾದ ಜಾಗದಲ್ಲಿ ಎಸ್ಐಟಿಯವರು ಮಹಜರು ನಡೆಸಿದರು.
ಧರ್ಮಸ್ಥಳದ ಮಾಹಿತಿ ಕೇಂದ್ರದ ಸಮೀಪದಲ್ಲಿ ಕೊಠಡಿಯೊಂದರಲ್ಲಿ ಸಾಕ್ಷಿ ದೂರುದಾರ 10 ವರ್ಷಗಳ ಹಿಂದೆ ವಾಸವಾಗಿದ್ದ.
ಅಲ್ಲಿಗೆ ಆತನನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.