ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಗಳಾದ ಕೇರಳದ ಮನಾಫ್, ಅಭಿಷೇಕ್ ಎಸ್ಐಟಿ ವಿಚಾರಣೆಗೆ ಇಂದು (ಸೆ.9 , ಬುಧವಾರ) ಹಾಜರಾಗಿದ್ದಾರೆ.
ಆರನೇ ದಿನದ ವಿಚಾರಣೆಗೆ ಎಸ್ಐಟಿ ಕಚೇರಿಗೆ ಎಲ್ಲರನ್ನೂ ವಿಚಾರಣೆಗೆ ಎಸ್.ಐ.ಟಿ ಅಧಿಕಾರು ಬುಲಾವ್ ನೀಡಿದ್ದರು. ಜಯಂತ್ ನಿನ್ನೆ (ಸೋಮವಾರ) ಎಸ್.ಐ.ಟಿ ಕಚೇರಿಗೆ ನಿನ್ನೆ (ಸೋಮವಾರ) ಹಿಂಬದಿ ದಾರಿಯಿಂದ ಬಂದಿದ್ದರು. ಇಂದು ಮುಂದಿನ ದಾರಿಯಲ್ಲೇ ಬಂದಿದ್ದಾರೆ. ಆದಾಗ್ಯೂ ಮಾಧ್ಯಮಗಳ ವರದಿಗಾರರಿಗೆ ಸ್ಪಂದಿಸದೇ ತೆರಳಿದ್ದಾರೆ. ಇವರೊಂದಿಗೆ ಪತ್ನಿಯೂ ಎಸ್ಐಟಿ ಕಚೇರಿ ವರೆಗೆ ಬಂದು ಬಳಿಕ ಹಿಂದಿರುಗಿದ್ದಾರೆ.
ಇನ್ನು, ಕೇರಳದ ಯೂಟ್ಯೂಬರ್ ಮನಾಫ್ ಮತ್ತು ಯೂಟ್ಯೂಬರ್ ಅಭಿಷೇಕ ಸಹ ಎಸ್.ಐ.ಟಿ ವಿಚಾರಣೆ ಹಾಜರಾಗಿದ್ದಾರೆ. ಮನಾಫ್ ತಮ್ಮ ರಕ್ಷಣೆಗಾಗಿ ಕೇರಳದಿಂದ ಜನ ಕರೆದುಕೊಂಡು ಬಂದಿರುವುದಾಗಿ ಕೆಲ ಮಾಧ್ಯಮಗಳು ಪ್ರಸಾರ ಮಾಡಿವೆ ಎಂಬ ವಿಚಾರಕ್ಕೆ ಮಾಧ್ಯಮದ ಮುಂದೆ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ತಾನು ಯಾರನ್ನೂ ಕರೆತಂದಿಲ್ಲ, ನನಗೆ ಯಾವ ಭಯವಿಲ್ಲ, ನಾನು ಸತ್ಯದ ಪರವಾಗಿ ಹೋರಾಡುತ್ತಿದ್ದೇನೆ. ಎಸ್ಐಟಿ ಎಲ್ಲ ವಿಚಾರಣೆಗೂ ನಾನು ಸ್ಪಂದಿಸುವುದಾಗಿ ತಿಳಿಸಿದ್ದಾರೆ.
ಗಿರೀಶ್ ಮಟ್ಟಣ್ಣವರ್ ಕೂಡ ವಿಚಾರಣೆಗೆ ಹಾಜರು :
ದರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರನೇ ದಿನದ ವಿಚಾರಣೆಗಾಗಿ ಇಂದು(ಸೆ.9) ಬೆಳಗ್ಗೆ ಗಿರೀಶ್ ಮಟ್ಟಣ್ಣವರ್ ಎಸ್.ಐ.ಟಿ. ಕ ಚೇರಿಗೆ ಹಾಜರಾಗಿದ್ದಾರೆ.