ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಜಯಂತ್.ಟಿ ಎಸ್.ಐ.ಟಿ ವಿಚಾರಣೆಗೆ ಸೆ.4 ರಂದು ಸಂಜೆ 5:20 ಕ್ಕೆ ಬ್ಯಾಗ್ ಜತೆ ಹಾಜರಾಗಿದ್ದು, ಅಧಿಕಾರಿಗಳು ಮಧ್ಯರಾತ್ರಿ 2:30 ರವರೆಗೆ ವಿಚಾರಣೆ ಮಾಡಿ ಸೆ.5 ರಂದು ಬೆಳಗ್ಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿ ವಾಪಸ್ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮತ್ತೊಂದೆಡೆ ಧರ್ಮಸ್ಥಳ ಪ್ರಕರಣ ಹಾಗೂ ಸುಜಾತಾ ಭಟ್ ಪ್ರಕರಣ ಸಂಬಂಧಿಸಿದಂತೆ ವಿಡಿಯೋ ಮಾಡಿ ಪ್ರಸಾರ ಮಾಡಿದ್ದ ಯೂಟ್ಯೂಬರ್ ಅಭಿಷೇಕ್ ಗೆ ಸೆ.3 ರಂದು ಎಸ್.ಐ.ಟಿ ವಿಚಾರಣೆಗೆ ಹೋಗಿ ಮುಂದುವರಿದ ಭಾಗವಾಗಿ ಸೆ.4 ರಂದು ಕೂಡ ರಾತ್ರಿ ಪೂರ್ತಿ ವಿಚಾರಣೆ ನಡೆಸಿದ್ದರು. ಇದೀಗ ಎಸ್.ಐ.ಟಿ ವಶದಲ್ಲಿರುವ ಅಭಿಷೇಕ್ ಸೆ.5 ರಂದು ಅಧಿಕಾರಿಗಳು ವಿಚಾರಣೆ ಮುಂದವರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಡಿನಲ್ಲಿ ಬುರುಡೆ ಅಥವಾ ಅಸ್ಥಿಪಂಜರದ ಅವಶೇಷಗಳನ್ನು ಹುಡುಕಿದ್ದು, ನ್ಯಾಯಾಲಯಕ್ಕೆ ಬುರುಡೆಯನ್ನು ತಂದು ಒಪ್ಪಿಸಿದ್ದು ಸೇರಿದಂತೆ, ಚಿನ್ನಯ್ಯನ ಸಂಪರ್ಕ ಇವೆಲ್ಲದಕ್ಕೂ ಜಯಂತ್ ಟಿ., ಅಭಿಷೇಕ್ ನಡುವೆ ಘಟನೆಗೆ ಸಂಬಂಧಿಸಿದಂತೆ ಷಡ್ಯಂತ್ರ ನಡೆಸಲು ಬಹುಪಾಲು ಇವರದು ಮಾಸ್ಟರ್ ಮೈಂಡ್ ಇರುವ ಸಾಧ್ಯತೆಯಿಂದ ತೀವ್ರವಾದ ವಿಚಾರಣೆಗೆ ಒಳಗಾಗುವ ಸಾಧ್ಯತೆಯಿದೆ ಎನ್ನಲಾಗಿದೆ.


















