ಮೈಸೂರು: ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕೆ.ಆರ್ ನಗರದ ಸಾಲಿಗ್ರಾಮದ ಚುಂಚನಕಟ್ಟೆಯ ಧನುಷ್ಕೋಟಿ ಜಲಪಾತ ತುಂಬಿ ಹರಿಯುತ್ತಿದೆ.
ಜಲಪಾತದಲ್ಲಿ ನೀರಿನ ಹರಿವು ಹೆಚ್ಚಳವಾಗಿರುವುದರಿಂದ ಜಲಪಾತ ಮನಮೋಹಕವಾಗಿ ಜನರನ್ನು ತನ್ನತ್ತ ಸೆಳೆಯುತ್ತಿದೆ. 27 ಮೀಟರ್ ಎತ್ತರದಿಂದ ನೀರು ಜಿಗಿಯುತ್ತಿದ್ದು, ಜಲಪಾತ ನೋಡುವುದಕ್ಕೆ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ಜಲಪಾತದ ಮುಂದೆ ಯುವಕ ಯುವತಿಯರು ಸೆಲ್ಫಿ ಮೊರೆ ಹೋಗಿದ್ದಾರೆ.