ದೇಶದಲ್ಲಿ ಸಧ್ಯಕ್ಕೆ ಆವರಿಸಿರೋ ಯುದ್ಧದ ಭೀತಿ ಘಟಾನುಘಟಿ ಸಿನಿಮಾಗಳನ್ನು ಮುಂದೂಡುವಂತೆ ಮಾಡ್ತಿದೆ. ನಿಗದಿಯಂತೆ ಮೇ 30ರಂದು ತೆರೆಗೆ ಅಪ್ಪಳಿಸಬೇಕಿದ್ದ ಕಿಂಗ್ ಡಮ್ ತೆಲುಗು ಸಿನಿಮಾ ಇದೀಗ ಬಿಡುಗಡೆಯನ್ನು ಮುಂದೂಡಿದೆ.

ವಿಜಯ್ ದೇವರಕೊಂಡ ಮತ್ತು ಭಾಗ್ಯಶ್ರೀ ಸಿನಿಮಾವನ್ನೀಗ ಜುಲೈ 4ಕ್ಕೆ ಮುಂದೂಡಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಚಿತ್ರತಂಡ, ದೇಶದಲ್ಲಿ ಸದ್ಯದ ಪರಿಸ್ಥಿತಿ ಅಭಿಮಾನಿಗಳನ್ನು ಚಿತ್ರಮಂದಿರಕ್ಕೆ ಕರೆತರುವಷ್ಟು ಉತ್ಸಾಹದಾಯಕವಾಗಿಲ್ಲ. ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಿದ್ದು, ಯೋಧರು ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡ್ತಿದ್ದಾರೆ ಇಂಥಾ ಪರಿಸ್ಥಿತಿಯಲ್ಲಿ ಸಿನಿಮಾ ಬಿಡುಗಡೆಗೊಳಿಸುವುದು ಸೂಕ್ತವಲ್ಲ. ಹೀಗಾಗಿ ನಮ್ಮ ಸಿನಿಮಾವನ್ನು ಜುಲೈ 4ಕ್ಕೆ ಮುಂದೂಡಲಾಗ್ತಿದೆ ಅಂತಾ ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ವಿಜಯ್ ದೇವರಕೊಂಡ ಅಭಿಮಾನಿಗಳು ತಮ್ಮ ನಟನ ಕಿಂಗ್ ಡಮ್ ದರ್ಶನಕ್ಕೆ ಜುಲೈ 4ರವರೆಗೂ ಕಾಯಲೇಬೇಕಾಗಿದೆ.