ಕೋಲಾರ: RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ ದುರಂತದಲ್ಲಿ ಕೋಲಾರ ನಗರದ ಸಹನಾ ಸಾವನ್ನಪ್ಪಿದ್ದಾರೆ. ಮಗಳನ್ನು ಕಳೆದುಕೊಂಡ ಮೃತ ಸಹನಾ ತಂದೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಅವ್ಯವಸ್ಥೆ ಮಾಡಿ ಸರ್ಕಾರ ಪರಿಹಾರ ಕೊಟ್ಟರೆ ಹೇಗೆ? ನಿರ್ಲಕ್ಷ್ಯವೇ ಕಾಲ್ತುಳಿತ ಘಟನೆಗೆ ಕಾರಣ. ಇಂತಹ ದೊಡ್ಡ ಪ್ರಮಾಣದಲ್ಲಿ ಜನರು ಸೇರುವಾಗ ಮುಂಜಾಗ್ರತಾ ಕ್ರಮವೇ ತೆಗೆದುಕೊಂಡಿಲ್ಲ. ಮಗಳು ಸಹನಾಳನ್ನು, ಗಂಡು ಮಗುವಿನಂತೆ ಬೆಳೆಸಿದ್ದೇವು. ಇಂಜಿನಿಯರ್ ಮಾಡಿ ಕಳೆದ 2 ವರ್ಷದಿಂದ ಕೆಲಸ ಮಾಡುತ್ತಿದ್ದಳು. ಮುಂದೆ ಉನ್ನತಮಟ್ಟದ ವ್ಯಾಸಾಂಗ ಗುರಿಯನ್ನ ಸಹ ಹೊಂದಿದ್ದಳು. ಮುಂದೆ ಇಂತಹ ದುರಂತ ಘಟನೆ ಯಾರಿಗೂ ಆಗಬಾರದು ಎಂದು ಕಣ್ಣೀರು ಸುರಿಸಿದ್ದಾರೆ.