ಬೆಂಗಳೂರು: ಪ್ರತಾಪ್ ಸಿಂಹನನ್ನು ಬಿಜೆಪಿಯವರು ಕಿತ್ತು ಬಿಸಾಕಿದ್ದಾರೆ. ಹೀಗಾಗಿ ನಾನೂ ಬದುಕಿದ್ದೀನಿ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ತಡೆ ಕೋರಿ ಹೈಕೋರ್ಟ್ ಗೆ ಪ್ರತಾಪ್ ಸಿಂಹ ಅರ್ಜಿ ನೀಡಿರುವ ವಿಚಾರವಾಗಿ ಮಾತನಾಡಿದ ಅವರು, ಪಾಪ ಅವರದ್ದು ರಾಜಕೀಯ. ಬಿಜೆಪಿಯವರು ಪ್ರತಾಪ್ ಸಿಂಹನನ್ನು ಕಿತ್ತು ಬಿಸಾಕಿದ್ದಾರೆ. ನಾನು ಬದುಕಿದ್ದೀನಿ ಎಂದು ತೋರಿಸಿಕೊಳ್ಳಬೇಕು. ಅದಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಬಿಜೆಪಿವರಿಗೆ ಬೇರೆ ಏನೂ ವಿಚಾರ ಇಲ್ಲ. ಮಹದಾಯಿ, ಮೇಕೆದಾಟು, ಕೃಷ್ಣ ಯೋಜನೆಗೆ ದೆಹಲಿಗೆ ಹೋಗಿ ಅನುದಾನ ಕೊಡಿಸಲಿ? ಇವೆಲ್ಲಾ ಕೇವಲ ಪ್ರಚಾರಕ್ಕೋಸ್ಕರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಧರ್ಮಸ್ಥಳಕ್ಕೆ ನ್ಯಾಯ ಒದಗಿಸಿಕೊಡುತ್ತಿರುವುದು ನಾವು. ಧರ್ಮಸ್ಥಳದಲ್ಲಿ ಅವರದ್ದು ಎರಡು ಗುಂಪುಗಳಿವೆ. ಅವರಿಂದಲೇ ಇದೆಲ್ಲಾ ಆಗುತ್ತಿರುವುದು. ಆ ಬುರುಡೆ ಗಿರಾಕಿ ಯಾರವನು? ಅವರು ಯಾರು ಎಂದು ಬಿಜೆಪಿಯವರು ಹೇಳಿಕೊಳುವುದಕ್ಕೆ ಆಗುತಿಲ್ಲ. ಧರ್ಮಸ್ಥಳಕ್ಕೆ ಅವಮಾನ, ಅನ್ಯಾಯ ಆಗಿದೆ ಎಂದರೆ ಬಿಜೆಪಿಯ ನಾಯಕರಿಂದ. ಬಿಜೆಪಿಯ ಸಂಘಟನೆಯಿಂದ ಅಪಮಾನವಾಗಿದೆ ಎಂದು ಆರೋಪಿಸಿದ್ದಾರೆ.