ದಾವಣಗೆರೆ : ದಾವಣಗೆರೆಯಲ್ಲಿ ಮತದಾನದ ಮಹತ್ವವನ್ನು ಸಾರುವ ಮನಮುಟ್ಟುವ ಘಟನೆ ನಡೆದಿದೆ. 90 ವರ್ಷದ ಹಿರಿಯ ನಾಗರಿಕ ಕೆ.ಎಸ್. ಸೀತಾರಾಮರಾವ್ ಅವರು ಆರೋಗ್ಯ ಸಮಸ್ಯೆಯ ನಡುವೆಯೂ ತಮ್ಮ ಮತದಾನ ಹಕ್ಕನ್ನು ಚಲಾಯಿಸಿ ಮಾದರಿಯಾಗಿದ್ದಾರೆ.
ಜೆ.ಹೆಚ್. ಪಟೇಲ್ ನಗರ ನಿವಾಸಿಯಾದ ಸೀತಾರಾಮರಾವ್ ಅವರು, ಕಳೆದ ಕೆಲವು ದಿನಗಳ ಹಿಂದೆ ಕಾಲು ಜಾರಿ ಬಿದ್ದು ಸೊಂಟಕ್ಕೆ ಗಂಭೀರ ಗಾಯಗೊಂಡಿದ್ದರು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಸೊಂಟಕ್ಕೆ ರಾಡ್ ಹಾಕಿದ್ದು, ಕಟ್ಟುನಿಟ್ಟಿನ ಬೆಡ್ ರೆಸ್ಟ್ ಸೂಚಿಸಿದ್ದರು.
ಆದರೂ, ಇದು ನಮ್ಮ ಹಕ್ಕು, ನಾವು ಚಲಾಯಿಸಬೇಕು”ಎಂಬ ದೃಢ ನಿಲುವಿನಿಂದ ಅವರು ಆಂಬ್ಯುಲೆನ್ಸ್ ಮೂಲಕ ಮತಗಟ್ಟೆಗೆ ಆಗಮಿಸಿದ್ದಾರೆ. ಎಕ್ಸ್ ಮುನ್ಸಿಪಲ್ ಶಾಲೆಯ 198ನೇ ಮತಗಟ್ಟೆಯಲ್ಲಿ ಅವರು ತಮ್ಮ ಮತ ಚಲಾಯಿಸಿದ್ದಾರೆ. ಕುಟುಂಬ ಸದಸ್ಯರ ಸಹಾಯದಿಂದ ಸ್ಟ್ರೇಚರ್ ಮೇಲೆ ಅವರನ್ನು ಮತಗಟ್ಟೆಗೆ ಕರೆದೊಯ್ಯಲಾಗಿದ್ದು, ಅಲ್ಲಿಯೇ ಮಲಗಿಕೊಂಡು ಮತ ಹಾಕಿದ್ದಾರೆ.
ತೀವ್ರ ಅನಾರೋಗ್ಯದಲ್ಲಿದ್ದರೂ ಮತದಾನ ಮಾಡಿದ ಸೀತಾರಾಮರಾವ್ ಅವರು, ಮತ ಹಾಕದೆ ನಿರ್ಲಕ್ಷ್ಯ ತೋರಿಸುವ ಯುವಕರಿಗೆ ಮತ್ತು ಇತರ ಮತದಾರರಿಗೆ ಸ್ಪೂರ್ತಿದಾಯಕ ಉದಾಹರಣೆಯಾಗಿದ್ದಾರೆ.
ಇದನ್ನೂ ಓದಿ : ವಿಜಯಪುರದಲ್ಲಿ ಮತ್ತೆ ಭೂಕಂಪನ ಅನುಭವ : ಆತಂಕಕ್ಕೊಳಗಾದ ಜನ



















