ಬೆಂಗಳೂರು: ನನ್ನ ಬಳಿ ದರ್ಶನ್ (Darshan) ನಂಬರ್ ಇಲ್ಲ. ಸಂಪರ್ಕದಲ್ಲೂ ಇಲ್ಲ ಎಂದು ರಮ್ಯಾ (Ramya) ಹೇಳಿದ್ದಾರೆ.
ದರ್ಶನ್ ಅಭಿಮಾನಿಗಳ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ನಂತರ ಮಾತನಾಡಿದ ಅವರು, ನಟ ದರ್ಶನ್ ಗೆ ಜವಾಬ್ದಾರಿ ಇದೆ. ಈ ರೀತಿಯ ಮಸೇಜ್ಗಳ ವಿರುದ್ಧ ತಿಳಿ ಹೇಳಿ ವಿಡಿಯೋ ಮಾಡಿದ್ದರೆ, ರೇಣುಕಾಸ್ವಾಮಿ ಮೆಸೇಜ್ ಮಾಡುತ್ತಿರಲಿಲ್ವೋ ಏನೋ? ರೇಣುಕಾಸ್ವಾಮಿ ದರ್ಶನ್ ಅಭಿಮಾನಿ ಅಲ್ವಾ? ಮೊದಲೇ ದರ್ಶನ್ ಎಚ್ಚರಿಕೆ ನೀಡುತ್ತಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ನನಗೆ ಬಹಳಷ್ಟು ಕೆಟ್ಟ ಕಮೆಂಟ್ ಬಂದಿವೆ. ಈ ಪೈಕಿ 43 ಖಾತೆಗಳ ವಿರುದ್ಧ ದೂರು ನೀಡಿದ್ದೇನೆ. ನನ್ನನ್ನು ರೇಪ್ ಮಾಡಬೇಕಿತ್ತು. ರೇಣುಕಾಸ್ವಾಮಿ ಬದಲು ನಿಮ್ಮನ್ನು ಹತ್ಯೆ ಮಾಡಬೇಕಿತ್ತು ಎಂದು ಡಿ ಬಾಸ್ ಫ್ಯಾನ್ಸ್ ಕಮೆಂಟ್ ಮಾಡಿದ್ದರು ಎಂದು ಆರೋಪಿಸಿದ್ದಾರೆ.
ಹುಡುಗಿಯರ ಹೆಸರಿನಲ್ಲಿರುವ ಖಾತೆಗಳ ವಿರುದ್ಧವೂ ದೂರು ನೀಡಿದ್ದೇನೆ. ಹುಡುಗಿಯರು ಈ ರೀತಿ ಕೆಟ್ಟ ಕಮೆಂಟ್ ಮಾಡಲಿಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ. ಹೆಣ್ಮಕ್ಕಳ ಫೋಟೋವನ್ನು ಹುಡುಗರು ದುರ್ಬಳಕೆ ಮಾಡಿರುವ ಸಾಧ್ಯತೆಯಿದೆ ಎಂದು ಆರೋಪಿಸಿ ಹೇಳಿದ್ದಾರೆ.