ಮಂಡ್ಯ : ಡಿಕೆ ಶಿವಕುಮಾರ್ ಸಿಎಂ ಆಗಬೇಕು, ಆಗೇ ಆಗ್ತಾರೆ ಅದರಲ್ಲಿ ಎರಡೂ ಮಾತಿಲ್ಲ ಎಂದು ಡಿಕೆಶಿ ಪರ ಮತ್ತೆ ಶಾಸಕ ರವಿಕುಮಾರ್ ಗಣಿಗ ಬ್ಯಾಟ್ ಬೀಸಿದ್ದಾರೆ.
ಸಿಎಂ ಬದಲಾವಣೆ ಹಾಗೂ ಶಾಸಕರ ಫಾರಿನ್ ಟೂರ್ ಚರ್ಚೆ ವಿಚಾರವಾಗಿ ಮಂಡ್ಯದಲ್ಲಿ ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ನಾನು 10 ದಿನ ಊರಿನಲ್ಲಿರಲಿಲ್ಲ, ಲಂಡನ್ ಪ್ರವಾಸದಲ್ಲಿದ್ದೆ. ಗುಂಪಿನಲ್ಲಿ 15 ಜನ ಶಾಸಕರು ದುಬೈ ಗೆ ಹೋಗಿದ್ವಿ ಅದನ್ನ ಸಿಎಂ, ಡಿಸಿಎಂ ಕಳ್ಸಿದ್ರು ಅಂತ ಹೇಳಕ್ಕಾಗುತ್ತಾ? ಎಂದು ಸಿಡಿಮಿಡಿಗೊಂಡಿದ್ದಾರೆ.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು, ಆಗ್ತಾರೆ ಎನ್ನುವುದರಲ್ಲಿ ಎರಡೂ ಮಾತಲ್ಲಿ. ಟ್ರೀಪ್, ರೆಸಾರ್ಟ್ಗೆ ಹೋಗೋದು ನಾಲ್ಕು ಜನ ಎಂಎಲ್ಎ ಕುಳಿತು ಊಟ ಮಾಡುದ್ರೆ ಮುಖ್ಯಮಂತ್ರಿ ಬದಲಾವಣೆ ಆಗಲ್ಲ. ಫಾರಿನ್ ನಿಂದ ವಾಪಸ್ ಬಂದು ಮುಖ್ಯಮಂತ್ರಿನಾ ಉಳಿಸೋಕು ಆಗೋಲ್ಲ, ಬದಲಾವಣೆ ಮಾಡಕು ಆಗೋಲ್ಲ ಎಂದು ಹೇಳಿದ್ದಾರೆ.
ಕಾಲ ಬಂದಾಗ ಸಿಎಂ ಬದಲಾವಣೆ ಆಗಲೇಬೇಕು. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ. ಡಿಕೆಶಿ ಸಿಎಂ ಆಗುವುದನ್ನ ತಪ್ಪಿಸೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಡಿಕೆ ಶಿವಕುಮಾರ್ 40 ವರ್ಷ ರಾಜಕಾರಣವನ್ನು ಅರೆದು ಕುಡಿದಿದ್ದಾರೆ. ರಾಜಕೀಯ ತಂತ್ರಗಾರಿಕೆ, ಚಾಣಾಕ್ಷತನ ಅವರಲ್ಲಿದೆ. ಅವರು ಸೈಲೆಂಟ್ ಆಗಿ ಕಾಯಿನ್ ಮೂವ್ ಮಾಡ್ತಿದ್ದಾರೆ ಅಂದ್ರೆ ಗೇಮ್ ಗೆಲ್ತಾರೆ. ರಾಜಕಾರಣ ಅಂದ ಮೇಲೆ ಆಟ ಇದ್ದೆ ಇರುತ್ತೆ. 136 ಜನ ಆಟಗಾರರು ಡಿಕೆ ಪರ ಇದ್ದೇವೆ ಅತೀ ಶೀಘ್ರದಲ್ಲೇ ಉತ್ತರ ಬರುತ್ತದೆ. ನಾವು ಬಿಜೆಪಿಗೆ ಯಾಕೆ ಹೋಗಬೆಕು? ಡಿಕೆಶಿ ಅವರು ನಮ್ಮ ಪಕ್ಷದಿಂದಲೇ ಸಿಎಂ ಆಗ್ತಾರೆ ಎಂದಿದ್ದಾರೆ.
ಇದನ್ನೂ ಓದಿ : ಭದ್ರತೆಯ ನೆಪ | ಟಿ20 ವಿಶ್ವಕಪ್ನಿಂದ ಬಾಂಗ್ಲಾದೇಶ ಹೊರಕ್ಕೆ.. ಭಾರತಕ್ಕೆ ಬರದಂತೆ ತಡೆದ ‘ಕೋಲ್ಕತ್ತಾ ಕಹಿ’ ಘಟನೆ!



















