ಸಹನಟಿ ಮೇಲೆ ಅತ್ಯಾಚಾರ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ನಟ ಮಡೆನೂರು ಮನು, ಜೈಲಿನಿಂದ ಹೊರ ಬಂದಿದ್ದಾರೆ. ಈ ಮಧ್ಯೆ ಹಲವು ಹಿರಿಯ ನಟರ ಬಗ್ಗೆ ಮನು ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂಬ ಆಡಿಯೋವೊಂದು ವೈರಲ್ ಆಗಿತ್ತು. ಆ ವಿಡಿಯೋಗೆ ಸಂಬಂಧಿಸಿದಂತೆ ಮನು ಹಿರಿಯ ನಟರ ಕ್ಷಮೆ ಕೇಳುತ್ತಿದ್ದಾರೆ.
ಕನ್ನಡದ ಸ್ಟಾರ್ ನಟರಾದ ಶಿವರಾಜಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾ ಬಗ್ಗೆ ಅಸಂಬದ್ಧವಾಗಿ ಮಾತನಾಡಿದ್ದಕ್ಕೆ ನಟರ ಅಭಿಮಾನಿಗಳು ತೀವ್ರ ಆಕ್ರೋಶ ಹೊರ ಹಾಕಿದ್ದರು. ಈ ವಿಚಾರವಾಗಿ ಜೈಲಿನಿಂದ ಹೊರ ಬರುತ್ತಿದ್ದಂತೆ ಮನು ಶಿವಣ್ಣನಿಗೆ ಕ್ಷಮಾಯಾಚಿಸಿದ್ದರು. ಇದೀಗ ನಟ ದರ್ಶನ್ ಅವರಿಗೆ ವಿಡಿಯೋ ಮೂಲಕ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
ಡಿ ಬಾಸ್ ಫ್ಯಾನ್ಸ್ ನನಗೆ ಫೋನ್ ಮೆಸೇಜ್ ಮಾಡಿದ್ದರು. ಒಂದ ಸಲ ದರ್ಶನ್ ಅವರನ್ನು ಮೀಟ್ ಮಾಡಿ ಎಂದಿದ್ದರು. ಡಿ ಬಾಸ್ ನಾನು ಪುಟ್ಟ ಕಲಾವಿದ. ನನ್ನನ್ನು ದಯವಿಟ್ಟು ಕ್ಷಮಿಸಿ. ನಾನು ಸುಮಾರು ಸಲ ಅವರನ್ನು ಭೇಟಿಯಾಗುವ ಉದ್ದೇಶದಿಂದ ಕರೆ ಮಾಡಿದೆ. ಮೆಸೇಜ್ ಮಾಡಿದೆ. ಆದರೆ ಅವರು ಬ್ಯೂಸಿಯಾಗಿದ್ದಾರೆ. ಹೀಗಾಗಿ ಬಹಿರಂಗವಾಗಿ ಕ್ಷಮೆ ಕೇಳಲು ನಾನು ಈ ವಿಡಿಯೋ ಮಾಡುತ್ತಿದ್ದೇನೆ. ನನ್ನ ಉಸಿರು ಇರುವವರೆಗೂ ನಿಮ್ಮನ್ನೆಲ್ಲ ನಾನು ಮರೆಯೋದಿಲ್ಲ.
ಡಿ ಬಾಸ್ ನಾನೊಬ್ಬ ಪುಟ್ಟ ಕಲಾವಿದ. ಒಂದು ಸಂಘ, ಸಹವಾಸಗಳನ್ನು ಮಾಡಿ, ಜೊತೆಯಲ್ಲಿ ಇರುವವರನ್ನು ನಂಬಿ, ಈ ಆಡಿಯೋಗೆ ನಾನು ಬಲಿಯಾಗಿದ್ದೇನೆ. ದಯಮಾಡಿ ನನ್ನನ್ನು ಕ್ಷಮಿಸಿ..ಕ್ಷಮಿಸಿ..ಕ್ಷಮಿಸಿ..ಎಂದು ಕೈ ಕೇಳಿಕೊಂಡಿದ್ದಾರೆ. ಈ ಮೊದಲು ಜೈಲಿನಿಂದ ರಿಲೀಸ್ ಆದ ವೇಳೆ ಶಿವಣ್ಣ, ದರ್ಶನ್ ಮತ್ತು ಧ್ರುವ ಸರ್ಜಾ ಬಗ್ಗೆ ಆಡಿಯೋ ನನ್ನದಲ್ಲ. ನಾನು ಮಾತನಾಡಿಲ್ಲ ಎಂದ ಹೇಳಿದ್ದ ಮನು, ಇದೀಗ ಮತ್ತೆ ವಿಡಿಯೋ ಮೂಲಕ ದರ್ಶನ್ ಫ್ಯಾನ್ಸ್ಗೆ ಕ್ಷಮೆಯಾಚಿಸಿದ್ದಾರೆ.