ಭುವನೇಶ್ವರ : ಆಂಧ್ರ ಪ್ರದೇಶದತ್ತ ಮೊಂಥಾ ಸೈಕ್ಲೋನ್ ಎಂಟ್ರಿಕೊಟ್ಟಿದ್ದು, ಇದರ ಪರಿಣಾಮವಾಗಿ ಇಂದು ಹಲವೆಡೆ ಭೂಕುಸಿತ ಉಂಟಾಗಿದೆ. ಹೀಗಾಗಿ ವಿಶಾಖಪಟ್ಟಣಂ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತಿರುವ ಎಲ್ಲಾ 32 ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಅಕ್ಟೋಬರ್ 27ರಂದು 2 ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಗಳನ್ನು ರದ್ದುಗೊಳಿಸಲಾಗಿತ್ತು. ಎರಡು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಗಳನ್ನು ಹೊರತುಪಡಿಸಿ, ಉಳಿದ 30 ವಿಮಾನಗಳು ಅಕ್ಟೋಬರ್ 27ರಂದು ಕಾರ್ಯಾಚರಣೆ ನಡೆಸಿದ್ದವು. ಇದೀಗ ಎಲ್ಲಾ ವಿಮಾನ ಹಾರಾಟ ರದ್ದುಗೊಂಡಿದೆ. ವಿಜಯವಾಡ ವಿಮಾನ ನಿಲ್ದಾಣ ಕೂಡ ಇಂದು 16 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ.



















