ಬೆಂಗಳೂರು: ರಾಜ್ಯದಲ್ಲಿ ಮಳೆಗಾಲ ಸಂಪೂರ್ಣವಾಗಿ ಆರಂಭವಾಗುವ ಮೊದಲೇ ಮತ್ತೆ ಕೊರೊನಾ ಮಹಾಮಾರಿ ಎಂಟ್ರಿ ಕೊಟ್ಟಿರುವುದು ಜನರಲ್ಲಿ ಹೊಸದೊಂದ ಟೆನ್ಷನ್ ಶುರು ಮಾಡಿಸಿದೆ.
ಈಗಾಗಲೇ ರಾಜ್ಯದಲ್ಲಿ ಸಕ್ರಿಯ 38 ಕೊರೊನಾ ಪಾಸಿಟಿವ್ ಪ್ರಕರಣಗಳಿದ್ದು, ನಿನ್ನೆ ಬೆಂಗಳೂರಿನಲ್ಲಿ ಕೊರೊನಾ ಮಹಾಮಾರಿಗೆ ವೃದ್ಧನೊಬ್ಬ ಬಲಿಯಾಗಿದ್ದಾನೆ. ಇಷ್ಟು ದಿನ ಚಳಿಗಾಲದಲ್ಲಿ ಆತಂಕ ಸೃಷ್ಠಿಸುತ್ತಿದ್ದ ಕೊರೊನಾ ವೈರಸ್ ಇದೀಗ ಮಳೆಗಾಲದ ಆರಂಭದಲ್ಲೇ ಟೆನ್ಷನ್ ಕೊಡುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.



















