ಬೆಂಗಳೂರು: ದೇಶದಲ್ಲಿ ಕೊರೊನಾ ಮಹಾಮಾರಿ ಮತ್ತೆ ಎಂಟ್ರಿ ಕೊಟ್ಟಿದ್ದು, ರಾಜ್ಯದಲ್ಲಿ 234 ಸಕ್ರಿಯ ಪ್ರಕರಣಗಳು ದಾಖಲಾಗಿವೆ.
ಸರ್ಕಾರದಿಂದ ಈಗಾಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದ್ದು. ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಫೀವರ್ ಕ್ಲಿನಿಕ್ ಗೆ ವಾರ್ಡ್ ಓಪನ್ ಮಾಡಲಾಗಿದೆ. ಈಗಾಗಲೇ 50ಕ್ಕೂ ಅಧಿಕ ಬೆಡ್ ಗಳ ವ್ಯವಸ್ಥೆ ಮಾಡಲಾಗಿದ್ದು, ಸಾರಿ ಅಂದ್ರೆ ರೋಗಲಕ್ಷಣಗಳು ಇರುವ ವಾರ್ಡ್ 10, ಕೊವಿಡ್ ವಾರ್ಡ್, ಪುರುಷ ವಾರ್ಡ್ ಹಾಗೂ ಮಹಿಳಾ ವಾರ್ಡ್ ತಲಾ 10 ಬೆಡ್ ಗಳು, ಫೀವರ್ ಕ್ಲಿನಿಕ್ ಗೆ 6 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದಲ್ಲಿ ಜ್ವರ ಸೇರಿದಂತೆ ಕೊರೊನಾ ಗುಣಲಕ್ಷಣ ಇರುವ ವ್ಯಕ್ತಿಗಳಿಗೆ, ಮೊದಲು ಫೀವರ್ ಕ್ಲಿನಿಕ್ ನಲ್ಲಿ ಟೆಸ್ಟ್ ಮಾಡಿ, ಎರಡು ದಿನಗಳ ಕಾಲ ಚಿಕಿತ್ಸೆ ನೀಡಲಾಗುತ್ತದೆ. ಎರಡು ದಿನಗಳ ನಂತರ ರಿಪೋರ್ಟ್ ಬಂದ ಮೇಲೆ ಒಂದು ವೇಳೆ ಆ ವ್ಯಕ್ತಿಗೆ ಪಾಸಿಟಿವ್ ಇದ್ದರೆ ಕೊರೊನಾ ವಾರ್ಡ್ ಗೆ ಶಿಫ್ಟ್ ಮಾಡಲಾಗುತ್ತದೆ. ಕೊವಿಡ್ ಹಿನ್ನೆಲೆಯಲ್ಲಿ ಈಗಾಗಲೇ ವೆಂಟಿಲೇಟರ್ ಆಕ್ಸಿಜನ್ ಸೇರಿದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.