ಕರ್ನಾಟಕದಲ್ಲಿ ಕೊರೊನಾ ರಣಕೇಕೆ ಮತ್ತೆ ಶುರುವಾಗಿದೆಯಾ ಎನ್ನುವ ಅನುಮಾನ ಮೂಡಿಸುತ್ತಿದೆ.
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಮಹಾಮಾರಿಯ ಆರ್ಭಟ ಮೇರೆ ಮೀರುತ್ತಿದೆ. ಇನ್ನೂ ಆತಂಕಕಾರಿ ಎನ್ನುವಂತೀಗ ರಾಜ್ಯದಲ್ಲಿ ಕೋವಿಡ್ ಗೆ ಮೂರನೇ ಬಲಿಯಾಗಿದೆ. ಮೈಸೂರಿನಲ್ಲಿ 63 ವರ್ಷದ ವೃದ್ಧರೊಬ್ಬರು ಕೋವಿಡ್ ಗೆ ಪ್ರಾಣಬಿಟ್ಟಿದ್ದಾರೆ.
ಮೊದಲ ಬಲಿ ಬೆಂಗಳೂರನಲ್ಲಾಗಿದ್ದರೆ, ಎರಡನೇ ಜೀವ ಬೆಳಗಾವಿಯಲ್ಲಿ ಬಲಿಯಾಗಿದೆ. ಇದರ ಬೆನ್ನಲ್ಲೀಗ ಮೈಸೂರಿನಲ್ಲೂ ವೃದ್ಧರೊಬ್ಬರು ಜೀವವನ್ನು ಕೊರೊನಾ ಹಿಂಡಿದೆ. ಈಗಾಗಲೇ ಆರೋಗ್ಯ ತಜ್ಞರು ಕೂಡಾ ಓಮಿಕ್ರಾನ್ ನ ತಳಿ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಧರಿಸುವಂತೆಯೂ ಸಲಹೆ ನೀಡಿದ್ದಾರೆ.
ಸದ್ಯ ರಾಜ್ಯದಲ್ಲಿ 234 ಸಕ್ರಿಯ ಪ್ರಕರಣಗಳಿದ್ದರೆ 223 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ 11 ಮಂದಿ ಪೈಕಿ ಒಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಉಳಿದ 10 ಜನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ದೇಶದಲ್ಲಿ ಈವರೆಗೂ ಸೋಂಕಿತರ ಸಂಖ್ಯೆ 2710ಕ್ಕೆ ಏರಿಕೆಯಾಗಿದೆ.