ಮೈಸೂರು : ದಾವಣಗೆರೆ ಉಪ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ತೋರಿರುವ ಮನಸ್ಥಿತಿ ಮುಂದುವರಿದರೆ ಕಾಂಗ್ರೆಸ್ ಗೆ ಉಳಿಗಾಲವೇ ಇರಲ್ಲ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಮೈಸೂರಿನಲ್ಲಿ ಜಂಟಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ವಿ ಸೋಮಣ್ಣ, ಸೋಮಣ್ಣಗೆ ಕೆಲಸ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಏನೂ ಕೆಲಸ ಮಾಡುತ್ತಿದ್ದೇನೆ ಎಂಬುದು ಜನರಿಗೆ ಗೊತ್ತಿದೆ. ರೈಲ್ವೆ ಅಧಿಕಾರಿಗಳಿಗೆ ಗೊತ್ತಿದೆ. ರಾಜ್ಯದಲ್ಲಿ ರೈಲ್ವೆ ಇಲಾಖೆಯಿಂದ 52,958 ಕೋಟಿ ರೂ. ವೆಚ್ಚದ ಕಾಮಗಾರಿಗಳು ನಡೆಯುತ್ತಿದೆ. ನಾನು ಕರ್ನಾಟಕ ರೈಲ್ವೆ ಅಭಿವೃದ್ಧಿಗೆ ಮಾಡಿರುವ ಕೆಲಸವನ್ನು ಸಿಎಂ ಹೋಗಿ ನೋಡಲಿ ಎಂದು ಕಿಡಿಕಾರಿದ್ದಾರೆ.
ಮೈಸೂರು- ಬೆಂಗಳೂರು ಒಂದೇ ನಾಣ್ಯದ ಎರಡು ಮುಖಗಳು. ಈ ಭಾಗದಲ್ಲಿ ರೈಲ್ವೆ ಅಭಿವೃದ್ಧಿ ಕಾರ್ಯಗಳು ಹೆಚ್ಚಿನ ಪ್ರಮಾಣದಲ್ಲಿ ನಡೆದಿವೆ. ರಾಜ್ಯದಲ್ಲಿ ಈಗ ವಂದೇ ಭಾರತ್ 12 ರೈಲು ಓಡಾಡುತ್ತಿದೆ. ಇನ್ನೂ ಎರಡು ವಂದೇ ಭಾರತ್ ರೈಲ್ವೆ ಸಂಚಾರ ಕೆಲ ತಿಂಗಳಲ್ಲೆ ಆರಂಭವಾಗುತ್ತದೆ ಎಂದಿದ್ದಾರೆ. ಮೈಸೂರು – ಕುಶಾಲನಗರ ರೈಲ್ವೆ ಹಳಿ ನಿರ್ಮಾಣಕ್ಕೆ ರಾಜ್ಯ ಸರಕಾರ ಭೂಮಿ ಸ್ವಾಧೀನ ಮಾಡಿ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.
ಮೋದಿ ಏನೂ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಹೇಳ್ತಾರೆ. ಮಾತು ಎತ್ತಿದರೆ ಸೋಮಣ್ಣನಿಗೆ ಯಾವ ಫೈಲ್ ಬರುತ್ತೆ ಅಂತಾರೆ. ನನಗಿಂತ ನಿಮ್ಮ ಮನೆಗೆ ಹೆಚ್ಚು ಫೈಲ್ ಗಳು ಬರುತ್ತೆ. ನನ್ನ ಟೇಬಲ್ ಗೆ ಟೆಂಡರ್ ಫೈಲ್ಸ್ ಬರಲ್ಲ. ನಮಗೆ ಬೇಕಾದವರಿಗೆ ಟೆಂಡರ್ ಕೊಡೋಕೆ ಅವಕಾಶ ಇಲ್ಲ. ಕಮೀಷನ್ ನಿಗದಿ ಮಾಡಲು ನಮ್ಮಲಿ ಅವಕಾಶ ಇಲ್ಲ. ನಮ್ಮದು ಪಾರದರ್ಶಕ ಆಡಳಿತ. ನಂಗೆ ಅಭಿವೃದ್ಧಿಯ ಫೈಲ್ಸ್ ತರೆಸೋದು ಗೊತ್ತು. ಅಭಿವೃದ್ಧಿ ಮಾಡೋದು ಗೊತ್ತು? ಅಷ್ಟೆ ಎಂದು ಸಿದ್ದರಾಮಯ್ಯ ವಿರುದ್ಧ ಚಾಟಿ ಬೀಸಿದ್ದಾರೆ.
ಸಿಎಂ ಹತಾಶೆಗೊಂಡಿದ್ದಾರೆ. ರೈಲ್ವೆ ಅಭಿವೃದ್ಧಿ ಕಾಮಗಾರಿ ಭೂಮಿ ಸ್ವಾಧೀನಕ್ಕೆ ಸರಕಾರದ ಬಳಿ ಹಣವಿಲ್ಲ. ಕೇಂದ್ರದಿಂದ ಯಾವ ಅನುದಾನ ರಾಜ್ಯಕ್ಕೆ ಬಾಕಿ ಇದೆ ಎಂಬುದು ರಾಜ್ಯ ಸರಕಾರ ಹೇಳಲಿ. ನಂಗೆ ಹೇಗೂ ಕೆಲಸ ಇಲ್ಲ. ನಾನೇ ಓಡಾಡಿ ಬಾಕಿ ಅನುದಾನ ಕೊಡಿಸುತ್ತೇನೆ. ರಾಜ್ಯ ಸರಕಾರ ಖಾಲಿ ಡಬ್ಬ. ಖಾಲಿ ಡಬ್ಬಗಳ ರಾಜ್ಯ, ಸರಕಾರದ ಪ್ರತಿನಿಧಿಗಳಿಗೆ ಬರೀ ಸುಳ್ಳು ಹೇಳುವುದೇ ಕೆಲಸವಾಗಿದೆ. ರಾಜ್ಯ ಸರಕಾರದ ಸಚಿವರು, ಕೇಂದ್ರದ ಸಚಿವರ ಬಗ್ಗೆ ಹೊಟ್ಟೆ ತುಂಬಾ ನೋವು ಇಟ್ಟು ಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಹೊರ್ಮುಜ್ನಲ್ಲಿ ಇರಾನ್ ಹೊಸ ‘ನೌಕಾ ನಕ್ಷೆ’.. ಸ್ಫೋಟಕಗಳಿಂದ ಹಡಗುಗಳನ್ನು ರಕ್ಷಿಸಲು ಕಟ್ಟುನಿಟ್ಟಿನ ಮಾರ್ಗಸೂಚಿ!



















