ತುಮಕೂರು : ವಾಸ್ತವಾಂಶವನ್ನ ಹೇಳಿಬಿಟ್ರೆ ಅದು ಬಹಳ ಜನಕ್ಕೆ ಹಿಡಿಸೋದಿಲ್ಲ.ಮೈನಾರಿಟಿಸ್ ಯಾಕೆ ಸಿಎಂ ಆಗಬಾರದು ವಾಲ್ಮೀಕಿ ಸಮಾಜದಿಂದ ಯಾಕೆ ಆಗಬಾರದು, ಬಲಿಜ ಸಮಾಜದಿಂದ ಯಾಕೆ ಆಗಬಾರದು ಎಲ್ಲಾ ಸಮುದಾಯದವರಿಗೂ ನ್ಯಾಯ ಕೊಡುವಂತಹದ್ದು ಕಾಂಗ್ರೆಸ್ ಪಕ್ಷ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಕೆ.ಎನ್.ರಾಜಣ್ಣ ದಲಿತ ಸಿಎಂ ಕುರಿತು ಮತ್ತೆ ಪುನರ್ ಉಚ್ಚರಿಸುತ್ತಾ, ದೇವರಾಜ ಅರಸು 1972 ರಲ್ಲಿ ಎಂಎಲ್ಎ ನೆ ಇರಲಿಲ್ಲ.ಆವತ್ತು ಅವರನ್ನ ಸಿಎಂ ಮಾಡ್ತಾರೆ. ಎಂಎಲ್ ಎ ಗಳು ಹೆಚ್ಚಿನ ಒಲವುವನ್ನ ಅವರಿಗೆ ತೋರಿಸಿದ್ರಿಂದ ಅವರನ್ನ ಸಿಎಂ ಮಾಡ್ತಾರೆ. ದೇವರಾಜು ಅರಸುಗೆ ಅವರ ಜಾತಿಯಿಂದ ಇನ್ನೊಬ್ಬ ಎಂಎಲ್ ಎ ಇರಲಿಲ್ಲ. ಹಾಗೇ ವೀರಪ್ಪ ಮೊಯ್ಲಿಗೂ ಅವರ ಜಾತಿಯಿಂದ ಇನ್ನೊಬ್ಬ ಎಂಎಲ್ ಎ ಇರಲಿಲ್ಲ.ಧರ್ಮಸಿಂಗ್ ಗೂ ಸಹ ಇನ್ನೊಬ್ಬ ಅವರ ಸಮುದಾಯದಿಂದ ಎಂಎಲ್ ಎ ಇರಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಒಕ್ಕಲಿಗರು, ಲಿಂಗಾಯತರು ಸಹ ಸಿಎಂ ಆಗಿದ್ದಾರೆ. ಎಲ್ಲರಿಗೂ ಅವಕಾಶ ಮಾಡಿ ಕೊಟ್ಟಿದೆ ಕಾಂಗ್ರೆಸ್ ಪಾರ್ಟಿ ಎಂದಿದ್ದಾರೆ.
ದಲಿತರು, ಬಲಿಜಿಗರು, ವಾಲ್ಮೀಕಿ ಎಲ್ಲಾ ಸಮುದಾಯ ಇದೆ. ರಾಜ್ಯದಲ್ಲಿ ಕುರುಬರು ಎಷ್ಟು ಇದ್ದಾರೋ ಅಷ್ಟೇ ವಾಲ್ಮೀಕಿ ಸಮುದಾಯದವರು ಇದ್ದಾರೆ ಎಲ್ಲ ಸಮುದಾಯದವರಿಗೂ ಅವಕಾಶ ಸಿಕ್ಕಾಗ ಗೌರವ ಬರಲಿದೆ. ಗುರುತಿಸಿದಾಗ ಆ ಸಮುದಾಯಗಳಿಗೆ ಕಾಂಗ್ರೆಸ್ ಪಕ್ಷದ ಮೇಲೆ ಒಲವು ಪ್ರೀತಿ ಬರಲಿದೆ. ಇಲ್ಲಪ್ಪ ನಮಗೂ ಒಂದು ಅವಕಾಶ ಕೊಡ್ತಾರೆ ಅಂತ. ಇವ್ರು ಮತ್ತೆ ಈ ಬಿಜೆಪಿ ಬಂದ್ರೆ ಲಿಂಗಾಯತರು, ಜೆಡಿಎಸ್ ಬಂದ್ರೆ ಒಕ್ಕಲಿಗರು ಮುಖ್ಯಮಂತ್ರಿ ಅಂದ್ರೆ. ಬೇರೆ ಸಮುದಾಯಕ್ಕೆ ನ್ಯಾಯ ಎಲ್ಲಿ ಕೊಟ್ಟಂಗೆ ಆಗುತ್ತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಐಶಾರಾಮಿ ಕಾರುಗಳಲ್ಲಿ ಬಂದು ಕಳ್ಳತನ ಮಾಡಿದ ವಿಲಾಸಿ ಕಳ್ಳರು | 2 ಮನೆಗಳಲ್ಲಿ ದರೋಡೆ



















