ರಾಮನಗರ: ಕಾಂಗ್ರೆಸ್ ಮುಖಂಡ ನಂಜೇಶ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶ್ರೀನಿವಾಸ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಹಾರೋಹಳ್ಳಿ ಬಳಿಯ ಕನಕಪುರ ಟೌನ್ ಇನ್ಸ್ ಪೆಕ್ಟರ್ ಅನಂತ್ರಾಮ್ ರಿಂದ ಫೈರಿಂಗ್ ನಡೆಸಲಾಗಿದ್ದು, ಶ್ರೀನಿವಾಸ್ ಬಲಗಾಲಿಗೆ ಗುಂಡು ತಗುಲಿದೆ. ಆರೋಪಿ ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿದೆ. ಸದ್ಯ ಆರೋಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈಗಾಗಲೇ ಇತರೆ ಮೂವರು ಆರೋಪಿಗಳಾದ ಕಿರಣ್, ಗೋಪಿ, ಪ್ರವೀಣ್ ರನ್ನು ತಮಿಳುನಾಡಿನಲ್ಲಿ ಬಂಧನ ಮಾಡಲಾಗಿದೆ. ಇನ್ನು, ಸಾತನೂರು ಡಾಬವೊಂದರಲ್ಲಿ ನಂಜೇಶ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕನಕಪುರದ ಸಾತನೂರಿನ ಹೊಂಗಾಣಿದೊಡ್ಡಿ ಗ್ರಾಮದ ನಂಜೇಶ್ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡನಾಗಿದ್ದ ಮತ್ತು ಡಿ.ಕೆ.ಬ್ರದರ್ಸ್ ಆಪ್ತನಾಗಿದ್ದ ಎನ್ನಲಾಗಿದೆ.



















