ಮೈಸೂರು: ಆರ್ ಸಿಬಿ ಸಂಭ್ರಮಾಚರಣೆಗೂ ಮುನ್ನ ಡಿಸಿಪಿ ಕರಿಬಸವನಗೌಡ ಅವರು ಹಲವು ಸಲಹೆ ನೀಡಿದ್ದರೂ ಐಎಎಸ್ ಅಧಿಕಾರಿ ಸತ್ಯವತಿ ತಿರಸ್ಕರಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಇದನ್ನು ತಿರಸ್ಕರಿಸಿದ್ದಾರೆ. ಅಲ್ಲದೇ, ಐಎಎಸ್ ಅಧಿಕಾರಿ ಸತ್ಯವತಿ ತಪ್ಪು ಮಾಡಿಲ್ಲ ಎಂದಿದ್ದಾರೆ.
ಈ ವಿಷಯವಾಗಿ ಮೈಸೂರಿನಲ್ಲಿ ಮಾತನಾಡಿದ ಅವರು, ಪೊಲೀಸರ ಪತ್ರಕ್ಕೆ ಸತ್ಯವತಿ ಏನು ಉತ್ತರ ನೀಡಿದ್ದಾಳೆಂಬುವುದು ನಿಮಗೆ ಗೊತ್ತಾ ಎಂದು ಮಾಧ್ಯಮದವರನ್ನು ಪ್ರಶ್ನಿಸಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (chinnaswamy Stadium) ನಡೆದ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಇರಲಿಲ್ಲ. ವಿಧಾನಸೌಧದ ಕಾರ್ಯಕ್ರಮವನ್ನು ಸರ್ಕಾರ ಆಯೋಜನೆ ಮಾಡಿಲ್ಲ. ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಈ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಸತ್ಯವತಿಯವರು ನನ್ನ ಬಳಿ ಈ ಕಾರ್ಯಕ್ರಮದ ಬಗ್ಗೆ ಕೇಳಿದರು. ನಾನು ಅನುಮತಿ ನೀಡಿ ಎಂದಿದ್ದೇನೆ. ವಿಧಾನಸೌಧದಲ್ಲಿ ಏನಾದರೂ ಘಟನೆ ಆಗಿದ್ಯಾ? ಸತ್ಯವತಿ ಏನು ತಪ್ಪು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.